ವೀರಾಜಪೇಟೆ, ಸೆ. 5: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಕಿರಿಯ ಅಭಿಯಂತರ ಐಮಂಗಲ ಗ್ರಾಮದ ಕುಂಡ್ರಂಡ ಚರ್ಮಣ ಅವರ ಸೇವೆಯನ್ನು ಪರಿಗಣಿಸಿ ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಬೀಳ್ಕೊಡಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಪೌಲ್ ಕ್ಷೇವಿಯಾರ್, ಉಪಾಧ್ಯಕ್ಷ ಎ.ಪಿ. ಪ್ರಸನ್ನ, ಖಜಾಂಚಿ ಮಂಡೇಟ್ಟಿರ ಸುರೇಶ್, ಕೆ.ಪಿ.ಟಿ.ಸಿ.ಎಲ್. ಸಹಾಯಕ ಅಭಿಯಂತರ ಅಂಜಲಿ ಮತ್ತಿತರರು ಉಪಸ್ಥಿತರಿದ್ದರು.