ಕುಶಾಲನಗರ, ಆ. 16: ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ 3 ಲಕ್ಷ ರೂ. ನಗದು ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಂತರರಾಜ್ಯ ಖದೀಮರು ಪೊಲೀಸರ ವಶವಾಗಿದ್ದಾರೆ. ಮಂಡ್ಯ ಪೊಲೀಸರು ಆಂಧ್ರ, ತಮಿಳುನಾಡು ಭಾಗದ ಮೂವರು ಆರೋಪಿಗಳನ್ನು ಬಂಧಿಸಿ ಕುಶಾಲನಗರಕ್ಕೆ ತಂದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಜುಲೈ 2 ರಂದು ಕುಶಾಲನಗರದ ಬ್ಯಾಂಕ್ ನಿಂದ ವ್ಯಕ್ತಿಯೊಬ್ಬರು 3 ಲಕ್ಷ ನಗದು ಡ್ರಾ ಮಾಡಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ಹಿಂಬಾಲಿಸಿ ಹಣದ ಬ್ಯಾಗ್ ಅಪಹರಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕುಶಾಲನಗರ ಅಪರಾಧ ವಿಭಾಗದ ಠಾಣಾಧಿಕಾರಿ ಸದಾಶಿವ ಮತ್ತು ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು.(ಮೊದಲ ಪುಟದಿಂದ) ಇದೇ ರೀತಿಯ ಪ್ರಕರಣ ಮಂಡ್ಯದಲ್ಲಿ ನಡೆದಿದ್ದು; ಅಲ್ಲಿನ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭ ಕಳ್ಳರು ಕುಶಾಲನಗರ ಪ್ರಕರಣ ಒಪ್ಪಿಕೊಂಡ ಮೇರೆಗೆ ಮಂಡ್ಯ ಪೊಲೀಸರು ಕುಶಾಲನಗರಕ್ಕೆ ಆರೋಪಿಗಳನ್ನು ಕರೆತಂದು ಮಹಜರು ನಡೆಸಿದ್ದಾರೆ.- ಸಿಂಚು