ಸುಂಟಿಕೊಪ್ಪ, ಆ. 1: ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಬೀಜೋಪಚಾರ ಆಂದೋಲನ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮ ನಡೆಯಿತು. ಮಡಿಕೇರಿ ತೋಟಗಾರಿಕಾ ವಿಸ್ತರಣಾ ಘಟಕದ ಬೇಸಾಯ ಶಾಸ್ತ್ರಜ್ಞ ಬಸವಲಿಂಗಯ್ಯ ಅವರು ಮಾತನಾಡಿ, ಮಲೆನಾಡು ಭಾಗದಲ್ಲಿ ಭತ್ತಗಳಿಗೆ ಬೆಂಕಿ ರೋಗ ಹರಡುತ್ತಿದ್ದು ಅಂತಹ ಸಂದರ್ಭದಲ್ಲಿ ಕಾರ್ಬನ್ ಡೈಜಿಮ್ ಕ್ರಿಮಿನಾಶಕವನ್ನು ಬಳಸುವದರಿಂದ ರೋಗವನ್ನು ತಪ್ಪಿಸಬಹುದು. ಇಂತಹ ರೋಗಗಳು ತುಂತುರು ಮಳೆ ಮತ್ತು ಬಿಸಿಲಿನ ತಾಪಮಾನ ಕಡಿಮೆ ಇರುವ ಸ್ಥಳದಲ್ಲಿ ಕಂಡುಬರುತ್ತದೆ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಕಾರ್ಯಕ್ರಮದÀ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯೆ ಓಡಿಯಪ್ಪನ ವಿಮಲಾವತಿ, ಸುಂಟಿಕೊಪ್ಪ ಕೃಷಿ ಅಧಿಕಾರಿ ಮನಸ್ವಿ, ಮಡಿಕೇರಿ ತೋಟಗಾರಿಕೆ ಇಲಾಖೆಯ ವಿಜ್ಞಾನಿ ವಿದ್ಯಾಶ್ರಿ, ಸಹಾಯಕ ಕೃಷಿ ಅಧಿಕಾರಿ ಪೊಡನೋಳನ ಎಸ್. ಬೋಪಯ್ಯ ಇದ್ದರು.

ನಾಕೂರು, ಕಾನ್‍ಬೈಲು, ಎಮ್ಮೆಗುಂಡಿ, ಅಂದಗೋವೆ, ಕೊಡಗರಹಳ್ಳಿ, ಕಂಬಿಬಾಣೆ, ಗರ್ವಾಲೆ ಮುಂತಾದ ಗ್ರಾಮಗಳ ರೈತರು ಭಾಗವಹಿಸಿದ್ದರು.