ಮಡಿಕೇರಿ, ಜು. 8: ಭಾರತ ಸಾಹಿತ್ಯಾತ್ಮಕ ಹಾಗೂ ಸಾಂಸ್ಕøತಿಕ ಸಂಸ್ಥೆಯಾದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್ ಮೈಸೂರು ದಸರಾ ಅಂಗವಾಗಿ ರಾಜ್ಯಮಟ್ಟದ ಕವನಗಳ ಸ್ಪರ್ಧೆಯನ್ನು ಏರ್ಪಡಿಸಿದೆ. ಕವನ ಸ್ಪರ್ಧೆಯಲ್ಲಿ ಅತ್ಯುತ್ತಮವೆಂದು ಆಯ್ಕೆಯಾದ ಐದು ಮಂದಿ ಹೊರನಾಡ ಕನ್ನಡಿಗರಿಗೆ, ಹತ್ತು ಮಂದಿ ರಾಜ್ಯದ ಕವಿಗಳು ಹಾಗೂ ಕವಯತ್ರಿಯರಿಗೆ ಮತ್ತು ಇಬ್ಬರು ವಿಶೇಷಚೇತನ ಕವಿಗಳಿಗೆ ರಾಜ್ಯಮಟ್ಟದ ದಸರಾ ಕಾವ್ಯೋತ್ಸವದಲ್ಲಿ ಕಾವ್ಯ ಪುರಸ್ಕಾರ ನೀಡಿ ಸನ್ಮಾನಿಸಲಾಗುವದು. ಕವನ ಸಂಕಲನಕ್ಕೆ ಆಯ್ಕೆಯಾದ ಕವನಗಳನ್ನು ಕಾವ್ಯ ದಸರಾ ರಾಜ್ಯಮಟ್ಟದ ಕವನ ಸಂಕಲನದಲ್ಲಿ ಪ್ರಕಟಿಸಲಾಗುವದು.

ಆಸಕ್ತಿಯುಳ್ಳ ಕವಿಗಳು, ಕವಯತ್ರಿಯರು ತಮ್ಮ ಎರಡು ಸ್ವರಚಿತ ಕವನಗಳನ್ನು ಸ್ವವಿಳಾಸವುಳ್ಳ ಪತ್ರದೊಂದಿಗೆ ಡಾ. ಭೇರ್ಯ ರಾಮಕುಮಾರ್, ಅಧ್ಯಕ್ಷರು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಹಾಗೂ ಸಾಂಸ್ಕøತಿಕ ಪರಿಷತ್, ಅರ್ಕೇಶ್ವರನಗರ ಬಡಾವಣೆ, ಕೆ.ಆರ್. ನಗರ, ಮೈಸೂರು ಜಿಲ್ಲೆ - 571602 ಈ ವಿಳಾಸಕ್ಕೆ ಆಗಸ್ಟ್ 10 ರೊಳಗೆ ತಲಪುವಂತೆ ಕಳುಹಿಸಬೇಕೆಂದು, ಹೆಚ್ಚಿನ ವಿವರಗಳಿಗೆ ಮೊ. 9449680583 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.