ವೀರಾಜಪೇಟೆ, ಜೂ. 28: ಜಿಲ್ಲೆಯಲ್ಲಿ ಕಳೆದ ಬಾರಿ ನಡೆದ ಪ್ರಕೃತಿ ವಿಕೋಪದಲ್ಲಿ ಸಾರ್ವಜನಿಕರು ಹಲವಾರು ಕಷ್ಟನಷ್ಟಗಳನ್ನು ಅನುಭವಿಸಿದ ಹಿನ್ನಲೆಯಲ್ಲಿ ಈ ಬಾರಿ ಮುಂಜಾಗ್ರತೆ ಕ್ರಮವಾಗಿ ಎನ್ಡಿಆರ್ಎಫ್ ತಂಡ ವೀರಾಜ ಪೇಟೆ ತಾಲೂಕಿನ ಮಾಕುಟ್ಟ, ಕರಡಿಗೋಡು, ಇಲ್ಲಿನ ನೆಹರುನಗರ, ಅರಸುನಗರ, ಅಯ್ಯಪ್ಪಬೆಟ್ಟ ಪ್ರದೇಶವನ್ನು ಖದ್ದು ಪರಿಶೀಲನೆ ನಡೆಸಿತು.
ತಂಡದಲ್ಲಿ ಒಟ್ಟು 30 ಸದಸ್ಯರಿದ್ದು ಕಮಾಂಡರ್ ಕೆ.ಪಿ. ಚೌದರಿ ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಪ್ರಕೃತಿ ವಿಕೋಪ ಉಂಟಾಗಿ ಸಾರ್ವಜನಿಕರಿಗೆ ಏನಾದರು ತೊಂದರೆ ಉಂಟಾದಲ್ಲಿ ಪಟ್ಟಣದ ಹೆಲ್ಪ್ಲೈನ್ 08274-257332, ಅಥವಾ 8639685630 ದೂರವಾಣಿ ಸಂಖ್ಯೆಯನ್ನು ಸಂಪರ್ಕಿ ಬಹುದಾಗಿದೆ. ಎನ್ಡಿಆರ್ಎಫ್ ತಂಡ ವೀರಾಜಪೇಟೆ ಭೇಟಿಯ ಸಂದರ್ಭ ದಲ್ಲಿ ಕಂದಾಯ ಪರಿವೀಕ್ಷಕ ಪಳಂಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಹಾಜರಿದ್ದು ಪ್ರಕೃತಿ ವಿಕೋಪದ ಸ್ಥಳಗಳ ಕುರಿತು ಮಾಹಿತಿ ನೀಡಿದರು.