ಹೆಬ್ಬಾಲೆ ಏ.26 : ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದ ಗ್ರಾಮ ದೇವತೆಯೂ ಆದ ಆಧಿಶಕ್ತಿ ಸ್ವರೂಪಿಣಿ ಶ್ರೀ ಅಳುವಾರದಮ್ಮ (ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿ ಯೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಚಿಕ್ಕಅಳುವಾರ ಶ್ರೀ ಅಳುವಾರದಮ್ಮ ದೇವಾಲಯ ಸಮಿತಿ ವತಿಯಿಂದ ಚೈತ್ರ ಕೃಷ್ಣ ಪಕ್ಷ ಚತುರ್ಥಿ ಅನುರಾಧ ನಕ್ಷತ್ರದಂದು ಶುಭಗಳಿಗೆ ಯಲ್ಲಿ ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕ ಜೆ. ಚಂದ್ರಣ್ಣ ನೇತೃತ್ವದಲ್ಲಿ ಬೆಳಿಗ್ಗೆ 8 ಗಂಟೆಗೆ ದೇವರ ವಿಗ್ರಹಗಳಿಗೆ ಗಂಗೆಸ್ನಾನ ಮಾಡಿಸಿ ಗಂಗೆಪೂಜೆ ನೆರವೇರಿಸಿ ವಾದ್ಯಗೋಷ್ಠಿಗೊಂದಿಗೆ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ದೇವರ ವಿಗ್ರಹಗಳನ್ನು ಹೊತ್ತ ಪುರುಷರು ಹಾಗೂ ಪೂರ್ಣಕುಂಭ ಹೊತ್ತ ಪುಟಾಣಿಗಳು ಮೆರವಣಿಗೆಯಲ್ಲಿ ಸಾಗಿದರು. ನಂತರ ದೇವಿಯ ಬನದಲ್ಲಿ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ದೇವರ ವಿಗ್ರಹಗಳಿಗೆ ವಿವಿಧ ಬಗೆಯ ಪುಷ್ಪ್ಪಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಚ್.ಪುಟ್ಟಸ್ವಾಮಿ ಹಾಗೂ ಕಾರ್ಯದರ್ಶಿ ಎ.ಎಚ್. ಶಿವಶಂಕರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದ ವಿತರಿಸಲಾಯಿತು.

ಹಬ್ಬದ ಅಂಗವಾಗಿ ದೇವಸ್ಥಾನ ಹಾಗೂ ಗ್ರಾಮವನ್ನು ಹಸಿರು ತಳಿರು ತೋರಣಗಳೊಂದಿಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಶೃಂಗರಿಸ ಲಾಗಿತ್ತು. ಗುರುವಾರ ರಾತ್ರಿ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಚೌಡೇಶ್ವರಿ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ದೇವಿಯ ಉತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ಗ್ರಾ.ಪಂ.ಅಧ್ಯಕ್ಷ ಕೆ.ಬಿ.ದೇವರಾಜು ಚಾಲನೆ ನೀಡಿದರು. ಇದೇ ಸಂದರ್ಭ ಆಕರ್ಷಕ ಮದ್ದುಗುಂಡು ಹಾಗೂ ಪಟಾಕಿಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಗ್ರಾಮದೇವತೆ ಹಬ್ಬಕ್ಕೆ ಚಿಕ್ಕಳುವಾರ ಸೇರಿದಂತೆ ದೊಡ್ಡಅಳುವಾರ, ಅರಿಸಿನಗುಪ್ಪೆ, ಸಿದ್ದಲಿಂಗಪುರ, ಆರನೇ ಹೊ¸ Àಕೋಟೆ, ತೊರೆನೂರು, ಹೆಬ್ಬಾಲೆ, ಸುತ್ತಮುತ್ತಲ ಸಾವಿರ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದು ಪುನೀತಾದರು.

ಈ ಸಂದರ್ಭ ತೊರೆನೂರು ಗ್ರಾ.ಪಂ.ಅಧ್ಯಕ್ಷ ಕೆ.ಬಿ.ದೇವರಾಜ್, ಸದಸ್ಯರಾದ ರೂಪಗಣೇಶ್, ಮಂಗಳಾಮಹೇಶ್, ಮಾಜಿ ಅಧ್ಯಕ್ಷ ಸಿ.ಕೆ.ಕರೀಗೌಡ, ಡಿ.ಆರ್.ಪ್ರೇಮ್ ಕುಮಾರ್, ಮಾಜಿ ಸದಸ್ಯರಾದ ಗಂಗಾಧರಪ್ಪ, ಟಿ.ಜಿ.ಶಿವಪ್ಪ, ದೇವಸ್ಥಾನ ಸಮಿತಿ ಉಪಾಧ್ಯಕ್ಷ ಎ.ಆರ್. ಮಹಾದೇವ, ಖಜಾಂಜಿ ವಿಜಯಕುಮಾರ್, ಸದಸ್ಯರಾದ ಟಿ.ಎಸ್.ಹರೀಶ್, ಎ.ಎಲ್.ಸುರೇಶ್, ಟಿ.ಜಿ.ವೆಂಕಟೇಶ್, ಎ.ಎಸ್.ಪ್ರಕಾಶ್, ಎ.ಪಿ.ಮಹೇಶ್, ಟಿ.ಜಿ.ಜಗದೀಶ್, ಟಿ.ವೈ.ಮಹದೇವ, ಎ.ಸಿ.ರವಿ, ಎನ್.ಎನ್.ವಿನು, ಗ್ರಾಮದ ಹಿರಿಯ ಮುಖಂಡ ಕಾಳೇಗೌಡ, ಸಿಬ್ಬಂದಿಗಳಾದ ಡಿ.ಎಚ್.ರತ್ನಾಕರ್, ಚಿನ್ನಸ್ವಾಮಿ ಇದ್ದರು. ದೇವಸ್ಥಾನ ಸಮಿತಿ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಹರಕೆ ಹೊತ್ತಿದ್ದ ಭಕ್ತರು ದೇವಿಗೆ ಹರಕೆ ಒಪ್ಪಿಸಿದರು. ಹಬ್ಬದ ಅಂಗವಾಗಿ ದೇವಸ್ಥಾನದ ಆವರಣದಲ್ಲಿ ರಾತ್ರಿ 8 ಗಂಟೆಗೆ ಕುಶಾಲನಗರ ಝೇಂಕಾರ್ ಮೆಲೋಡಿಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.