ಗೋಣಿಕೊಪ್ಪ ವರದಿ, ಏ. 27 : ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ಯರವ ಸಮಾಜದ ವತಿಯಿಂದ ನಡೆಯುತ್ತಿರುವ ಇಡೆಮಲೆಲಾತ್ಲೇರಂಡ ಕ್ರಿಕೆಟ್ ಟೂರ್ನಿಯಲ್ಲಿ 6 ತಂಡಗಳು ಗೆಲವು ಪಡೆದವು.

ಸ್ಟಾರ್ ಆಫ್ ಕೊಡಗು ತಂಡವು ಬಾಳೆಲೆ ಬ್ಲಾಸ್ಟರ್ ವಿರುದ್ಧ 55 ರನ್‍ಗಳ ಗೆಲವು ಪಡೆಯಿತು. ಕೊಡಗು ತಂಡವು 75 ರನ್ ಗಳಿಸಿತು. ಬಾಳೆಲೆ 22 ರನ್‍ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಮಡು ಸುಲಭವಾಗಿ ಸೋಲೊಪ್ಪಿಕೊಂಡಿತು.

ಕಾನನಕಾಡು ತಂಡವು ಬಾಣಂಗಾಲ ಹಂಟರ್ಸ್ ವಿರುದ್ಧ 6 ವಿಕೆಟ್ ಗೆಲವು ಸಾಧಿಸಿತು. ಕಾನನಕಾಡು 23 ರನ್ ಗಳಿಸಿತು. ಬಾಣಂಗಾಲ 22 ರನ್ ಗಳಿಸಿ ಸೋಲು ಅನುಭವಿಸಿತು.

ಬಾಳೆಲೆ ಬಾಯ್ಸ್ ತಂಡವು ಹೂಮಾಳ ತಂಡದ ವಿರುದ್ಧ 7 ವಿಕೆಟ್ ಜಯ ಪಡೆಯಿತು. ಬಾಳೆಲೆ ತಂಡ 28 ರನ್ ಗಳಿಸಿತು. ಹೂಮಾಳ ತಂಡವು 26 ರನ್ ಗಳಿಸಿ ಸೋಲನುಭವಿಸಿತು.

ಸಿಕ್ಸ್ ಅಯಿಂಡ್ ಫಿಕ್ಸ್ ತಂಡದ ವಿರುದ್ಧ ಸ್ಟಾರ್ ಆಫ್ ಕೊಡಗು ತಂಡವು 37 ರನ್ ಗಳ ಗೆಲವು ಪಡೆಯಿತು. ಸ್ಟಾರ್ ಅರ್ಫ ತಂಡವು 75 ರನ್ ದಾಖಲಿಸಿತು. ಸಿಕ್ಸ್ ಅಯಿಂಡ್ ಫಿಕ್ಸ್ ತಂಡವು 42 ರನ್ ಗಳಿಸಿ ಸೋಲು ಪಡೆಯಿತು.

ಕಾನನಕಾಡು ತಂಡವು ಸಿಟಿ ರೈಡರ್ಸ್ ವಿರುದ್ಧ 4 ವಿಕೆಟ್ ಗೆಲವು ಸಾಧಿಸಿತು. ಸಿಟಿರೈಡರ್ಸ್ ತಂಡವು 50 ರನ್ ಗಳಿಸಿತು. ಕಾನನಕಾಡು 51 ರನ್ ಗಳಿಸಿತು.

ಬಾಣಂಗಾಲ ಹಂಟರ್ಸ್ ತಂಡವು ರೇಂಜರ್ ತಂಡದ ವಿರುದ್ಧ 7 ವಿಕೆಟ್ ಜಯ ಸಾಧಿಸಿತು. ರೇಂಜರ್ 49 ರನ್ ದಾಖಲಿಸಿತು. ಬಾಣಂಗಾಲ 50 ರನ್ ಪೇರಿಸಿ ಗೆಲವು ಪಡೆದುಕೊಂಡಿತು.

ಫೈನಲ್: ಭಾನುವಾರ ಮ. 3 ಕ್ಕೆ ಫೈನಲ್ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ಶಾಸಕ ಕೆ.ಜಿ. ಬೋಪಯ್ಯ, ಜಿ. ಪಂ. ಸದಸ್ಯೆ ಪಂಕಜ, ಎಂಎಲ್ಸಿ ವೀಣಾ ಅಚ್ಚಯ್ಯ, ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ತಿತಿಮತಿ ಗ್ರಾ. ಪಂ ಅಧ್ಯಕ್ಷ ಶಿವಕುಮರ್, ಜಿ. ಪಂ. ಸದಸ್ಯ ಶಿವು ಮಾದಪ್ಪ, ತಾ. ಪಂ. ಸದಸ್ಯರುಗಳಾದ ಆಶಾಜೇಮ್ಸ್ ಹಾಗೂ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ. -ಸುದ್ದಿಪುತ್ರ