ಮೂರ್ನಾಡು, ಇ. 27 : ಗಾಂಧಿನಗರದ ಪಾಷಾಣಮೂರ್ತಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಹಾಗೂ ತೆರೆ ಮಹೋತ್ಸವ ತಾ. 29 ಹಾಗೂ 30 ರಂದು ನಡೆಯಲಿದೆ. ತಾ. 29ರಂದು ಬೆಳಿಗ್ಗೆ 6 ಗಂಟೆಯಿಂದ ವಿವಿಧ ಪೂಜಾ ಕಾರ್ಯಕ್ರಮ, 11 ಗಂಟೆಗೆ ಕಳಸ ಪ್ರತಿಷ್ಠಾಪನೆ, ಮಹಾಪೂಜೆ ಹಾಗೂ ಮಧ್ಯಾಹ್ನ ಅನ್ನದಾನ ನಡೆಯಲಿದೆ.

ತಾ. 30 ರಂದು ರಾತ್ರಿ 8 ಗಂಟೆಗೆ ಅನ್ನದಾನ 9 ಗಂಟೆಯಿಂದ ಪಂಜುರ್ಲಿ, ಪಾಷಾಣಮೂರ್ತಿ, ಗುಳಿಗ, ಅಂಗರ ದೈವ ತೆರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.