ಲೋಕಸಭಾ ಚುನಾವಣೆ ಸಂಬಂಧ ಜಿಲ್ಲಾ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದು, ಜಿಲ್ಲೆಯಲ್ಲಿ ಶಾಂತಿಯುತ ಮತದಾನ ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಗೌರವದಿಂದ ಪಾಲಿಸಿರುವದು ಅಭಿನಂದನಾರ್ಹ.

-ಅನೀಸ್ ಕಣ್ಮಣಿ ಜಾಯ್, ಜಿಲ್ಲಾಧಿಕಾರಿ

ಕೊಡಗಿನ ಗಡಿ ಕುಟ್ಟದಿಂದ ಇಡೀ ಕೊಡಗು ಜಿಲ್ಲೆಯಲ್ಲಿ ಸಂಚರಿಸಿದ್ದು, ಇಲ್ಲಿನ ಜನತೆ ಕಾನೂನಿಗೆ ನೀಡುವ ಗೌರವ ಕಂಡು ಮೆಚ್ಚುಗೆಯಾಯಿತು. ರಾಜಕೀಯ ಪಕ್ಷಗಳು ಕೂಡ ಉತ್ತಮ ಸಹಕಾರ ನೀಡಿವೆ.

-ಡಾ. ಸುಮನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಜಿಲ್ಲೆಯಲ್ಲಿ ಅತ್ಯುತ್ತಮ ಶೇಕಡವಾರು ಮತದಾನವಾಗಿದೆ. ಜನತೆ ಉತ್ತಮವಾಗಿ ಸ್ಪಂದಿಸಿದ್ದಾರೆ. ಯಾವದೇ ಕಹಿ ಘಟನೆ ನಡೆಯದಿರುವದು ಹರ್ಷದಾಯಕ ವಿಚಾರ.

-ಲಕ್ಷ್ಮೀಪ್ರಿಯ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಸ್ವೀಪ್ ಅಧ್ಯಕ್ಷೆ

ಎಸ್‍ಪಿ ಅವರ ಮಾರ್ಗ ದರ್ಶನದಲ್ಲಿ ಜಿಲ್ಲೆಯ ಡಿವೈಎಸ್‍ಪಿಗಳಾದ ಸುಂದರ್ ರಾಜ್, ನಾಗಪ್ಪ ಹಾಗೂ ದಿನಕರ್ ಶೆಟ್ಟಿ ಇವರುಗಳು ಕೂಡ ಹಲವು ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದ್ದು, ಜನತೆಯ ಸ್ಪಂದನೆಯ ಬಗ್ಗೆ ಶ್ಲಾಘಿಸಿದ್ದಾರೆ.