ಮಡಿಕೇರಿ, ಏ. 17: ಈ ಸಂಜೆ ದಕ್ಷಿಣ ಕೊಡಗಿನ ಕುಟ್ಟ, ತಿತಿಮತಿ, ಪಾಲಿಬೆಟ್ಟ, ಸಿದ್ದಾಪುರ ಮುಂತಾದೆಡೆಗಳಲ್ಲಿ ಮಳೆಯೊಂದಿಗೆ ಗಾಳಿಯ ರಭಸದೊಂದಿಗೆ ಗುಡುಗು ಕಾಣಿಸಿಕೊಂಡಿತು.

ಸುಂಟಿಕೊಪ್ಪ, ಸೋಮವಾರಪೇಟೆ ಮುಂತಾದ ಕಡೆಗಳಲ್ಲಿ ಕೂಡ ಗುಡುಗು ಸಹಿತ ಮಳೆಯ ವಾತಾವರಣದೊಂದಿಗೆ ಕಾರ್ಮೋಡ ಗೋಚರಿಸಿತು. ಚುನಾವಣೆಯ ನಡುವೆ ಎಲ್ಲೆಡೆ ಪೂರ್ವ ತಯಾರಿಯಲ್ಲಿದ್ದ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ವಾತಾವರಣದಿಂದ ಆತಂಕದಲ್ಲಿ ಕಂಡು ಬಂದರು. ರಾತ್ರಿ ಜಿಲ್ಲಾ ಕೇಂದ್ರದಲ್ಲಿ ಗುಡುಗು - ಸಿಡಿಲು ಸಹಿತ ಮಳೆ ಸುರಿಯಲಾರಂಭಿಸಿತು. ಈ ನಡುವೆ ಜಿಲ್ಲೆಯೆಲ್ಲೆಡೆ ಗಾಳಿಯ ರಭಸ ಹೆಚ್ಚಾಗಿತ್ತು. ವಿದ್ಯುತ್ ಕೂಡ ಕೈಕೊಟ್ಟ ಅನುಭವ ಉಂಟಾಯಿತು.