ಗುಡ್ಡೆಹೊಸೂರು, ಏ. 12: ಪ್ರತಿಯೊಬ್ಬರು ಮತದಾನ ಮಾಡುವದರ ಜೊತೆಗೆ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವಂತೆ ಬೀದಿ ನಾಟಕದ ಮೂಲಕ ಜನತೆಗೆ ತಿಳುವಳಿಕೆ ನೀಡಲಾಯಿತು. ನಾಟಕ ವನ್ನು ಕೊಡಗು ಜಿಲ್ಲಾ ವಿಧ್ಯಾಸಾಗರ ಕಲಾ ವೇದಿಕೆಯ ಈ. ರಾಜು ಮತ್ತು ತಂಡದವರು ನಡೆಸಿದರು. ಗುಡ್ಡೆಹೊಸೂರು ಪಿ.ಡಿ.ಓ. ಶ್ಯಾಂ ತಮ್ಮಯ್ಯ ಅವರು ನಗರಿ ಬಾರಿಸುವದರ ಮೂಲಕ ಉದ್ಘಾಟಿಸಿದರು.