*ಗೋಣಿಕೊಪ್ಪಲು, ಏ. 12: ಕಾನೂರು ಬಿ.ಜೆ.ಪಿ. ಸ್ಥಾನೀಯ ಸಮಿತಿ ವತಿಯಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರತಾಪ್ ಸಿಂಹ ಪರವಾಗಿ ಮನೆ ಮನೆ ಮತಯಾಚನೆ ನಡೆಯಿತು. ಕಾನೂರು ಸ್ಥಾನೀಯ ಸಮಿತಿಯ ಅಧ್ಯಕ್ಷ ಕಾಡ್ಯ ಮಾಡ ಮಾಚಯ್ಯ ಅವರ ನೇತೃತ್ವದಲ್ಲಿ ಸ್ಥಳೀಯ ಬಿ.ಜೆ.ಪಿ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿ ಸರ್ಕಾರ ಆಡಳಿತದ ಬಗ್ಗೆ ಮಾಹಿತಿ ನೀಡುವ ಮೂಲಕ ಮತಯಾಚಿಸಿದರು. ದೇಶ ಸುಭಿಕ್ಷೆಯಾಗಿ ಇರಲು ಮೋದಿ ಸರ್ಕಾರಕ್ಕೆ ಮತ ನೀಡುವ ಮೂಲಕ ದೇಶದ ಶಾಂತಿಗೆ ಕೈಜೋಡಿಸಬೇಕು. ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ತಮ್ಮ ಹಕ್ಕನ್ನು ಪ್ರತಿ ಪಾದಿಸಬೇಕು ಎಂದು ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ. ವರ್ತಕರ ಪ್ರಕೋಷ್ಠ ಅಧ್ಯಕ್ಷ ಕಾಡೇಮಾಡ ಗಿರೀಶ್ ಗಣಪತಿ ಕರೆ ನೀಡಿದರು. ಗಾನಂಗಡ ತಮ್ಮಯ್ಯ, ವಿ.ಟಿ. ರಘು, ಚೋನಿರ ಶರತ್, ಕಟ್ಟೇಂಗಡ ಕಾರ್ಯಪ್ಪ ಸೇರಿದಂತೆ ಹಲವರು ಹಾಜರಿದ್ದರು.