ಗುಡ್ಡೆಹೊಸೂರು, ಏ. 12: ಇಲ್ಲಿನ ಬಸವನಹಳ್ಳಿ ಮತ್ತು ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬಿ.ಜೆ.ಪಿ. ಮತ್ತು ಸಂಘ ಪರಿವಾರದ ಕಾರ್ಯಕರ್ತರು ಬೆಳಗ್ಗಿನಿಂದ ಸಂಜೆ ತನಕ ಪ್ರಚಾರ ನಡೆಸಿದರು.

ಈ ಸಂದರ್ಭ ಮೋದಿ ಸರಕಾರದ 5 ವರ್ಷದ ಸಾಧನೆಯನ್ನು ಮತ್ತು ಪ್ರತಾಪ್ ಸಿಂಹ ಅವರ ಕೆಲಸ ಕಾರ್ಯದ ಬಗ್ಗೆ ಕರಪತ್ರಗಳನ್ನು ಮನೆ ಮನೆಗೆ ಹಂಚುವದರೊಂದಿಗೆ “ನನ್ನ ಪರಿವಾರ ಬಿ.ಜೆ.ಪಿ. ಪರಿವಾರ” ಎಂಬ ಧ್ಯೇಯವಾಕ್ಯಗಳೊಂದಿಗೆ ಮತ್ತೊಮ್ಮೆ ಮೋದಿ ಸರಕಾರ ತರುವಂತೆ ಯುವಕರ ತಂಡ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಈ ತಂಡದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಶಶಿ, ಅರುಣ್, ಅಭಿರಂಗ, ಉಮೇಶ್, ಮನು ಉದಯ್ ಮುಂತಾದವರು ಪಾಲ್ಗೊಳ್ಳುತ್ತಿದ್ದಾರೆ.