ಸೋಮವಾರಪೇಟೆ, ಏ. 8: ನಗರಳ್ಳಿ, ಕುಂದಳ್ಳಿ, ಕೂತಿ ಗ್ರಾಮ ಗಳಲ್ಲಿ ಕಾಡಾನೆಗಳ ಕಾಟದಿಂದ ಕೃಷಿಕರು ಕಂಗಲಾಗಿದ್ದಾರೆ. ಕುಂದಳ್ಳಿ ಕಾಡು, ತಂಬಲಗೇರಿ ಅರಣ್ಯದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ರಾತ್ರಿ ಸಮಯದಲ್ಲಿ ಕಾಫಿ ತೋಟದಲ್ಲಿ ಕಾಣಸಿಗುತ್ತವೆ. ನಗರಳ್ಳಿ ಗ್ರಾಮದ ಎನ್.ಬಿ. ಗಣಪತಿ ಅವರ ಕಾಫಿ ತೋಟದಲ್ಲಿ ಅಳವಡಿಸಿದ್ದ 12 ಸ್ಪಿಂಕ್ಲರ್ ಪೈಪ್‍ಗಳನ್ನು ನಾಶಪಡಿಸಿವೆ. ಕಾಡಾನೆಗಳ ಕಾಲ್ತುಳಿತಕ್ಕೆ ಕಾಫಿ ಗಿಡಗಳು ನಾಶವಾಗಿವೆ. ಅಲ್ಲದೆ ಪ್ರಕಾಶ್, ಚಂದ್ರ, ತೀರ್ಥ ಅವರುಗಳ ಕಾಫಿ ತೋಟಗಳಲ್ಲಿ ಹಾನಿ ಮಾಡಿವೆ.