*ಸಿದ್ದಾಪುರ, ಏ. 1: ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವೈದ್ಯನಾಥ ದೈವರಾಜ ಕೋಟೆದಬಬ್ಬು ಸ್ವಾಮಿ ವಾರ್ಷಿಕೋತ್ಸವ ಮತ್ತು ನೇಮೋತ್ಸವ ತಾ. 6, 7 ಮತ್ತು 8 ರಂದು ನಡೆಯಲಿದೆ. ತಾ. 6 ರಂದು ಬೆಳಿಗ್ಗೆ 8 ಗಂಟೆಗೆ ಶ್ರೀ ವೈದ್ಯನಾಥ ಸ್ವಾಮಿಯ ಭಂಡಾರ ಹೇರಿಕೆ, ರಾತ್ರಿ 10 ಗಂಟೆಗೆ ಕೋಟೆದ ಬಬ್ಬು ಸ್ವಾಮಿ ಮತ್ತು ತಂಗಾಡಿ ತನ್ನಿಮಾನಿಗ ನೇಮೋತ್ಸವ ಪ್ರಾರಂಭಗೊಳ್ಳಲಿದೆ. ತಾ. 7 ರಂದು ರಾತ್ರಿ ಶ್ರೀ ಚಾಮುಂಡೇಶ್ವರಿ, ಕತಲಕಾನ ಗುಳಿಗ ಮತ್ತು ಪಂಜುರ್ಲಿ ಗುಳಿಗ ನೇಮೋತ್ಸವ ನಡೆಯಲಿದೆ.