ವೀರಾಜಪೇಟೆ, ಮಾ. 31: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಮಾರ್ಚ್ 29 ಮತ್ತು 30ರಂದು ಆಯೋಜಿಸಲಾಗಿದ್ದ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಮತ್ತು ಬಾಸ್ಕೆಟ್‍ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ನಡೆಯಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕÀರಾದ ಪ್ರೊ. ಇಟ್ಟೀರ ಬಿದ್ದಪ್ಪ, ಗ್ರಾಮೀಣ ವಲಯದ ಪ್ರತಿಭೆಗಳನ್ನು ಪೋಷಿಸಲು ಇಂತಹ ಪಂದ್ಯಾವಳಿಗಳನ್ನು ನಿರಂತರವಾಗಿ ಆಯೋಜಿಸಬೇಕೆಂದು ಕಿವಿಮಾತು ಹೇಳಿದರು. ನಾಯಡ ವಾಸು ನಂಜಪ್ಪ ಅವರು ಕಾವೇರಿ ಕಾಲೇಜು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.

ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಅಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಪದವಿ ಕಾಲೇಜಿನ ಪುರುಷರ (ಬಿ) ತಂಡವು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ತಂಡವನ್ನು 6-4 ಗೋಲಿನ ಅಂತರದಿಂದ ಮಣಿಸಿ ವಿಜಯಶಾಲಿಯಾಗಿ ಹೊರ ಹೊಮ್ಮಿತು. ತೃತೀಯ ಸ್ಥಾನವನ್ನು ವೀರಾಜಪೇಟೆ ಪದವಿ ಕಾಲೇಜಿನ (ಎ) ತಂಡವು ಪಡೆದುಕೊಂಡಿತು.

ಶಿಸ್ತುಬದ್ಧ ತಂಡವಾಗಿ ಮೈಸೂರಿನ ವಿದ್ಯಾಶ್ರಮ ಕಾಲೇಜಿಗೆ ಪ್ರಶಸ್ತಿ ನೀಡಲಾಯಿತು. ಉತ್ತಮ ಗೋಲ್‍ಕೀಪ್‍ರ್ ಪ್ರಶಸ್ತಿಯನ್ನು ವೀರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇಜಿನ ಸೋಮಣ್ಣ, ಉತ್ತಮ ರಕ್ಷಣಾತ್ಮಕ ಆಟಗಾರ ಪ್ರಶಸ್ತಿಯನ್ನು ಗೋಣಿಕೊಪ್ಪಲು ವಿದ್ಯಾನಿಕೇತನ ಕಾಲೇಜಿನ ಪ್ರತಿಕ್ ಪೊನ್ನಣ್ಣ, ಉತ್ತಮ ಮುನ್ನಡೆ ಆಟಗಾರ ಪ್ರಶಸ್ತಿಯನ್ನು ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ಪುರುಷರ (ಬಿ) ತಂಡದ ಕಾರ್ಲ್ ಕಾರ್ಯಪ್ಪ ಹಾಗೂ ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್ ಪಡೆದುಕೊಂಡರು.

ರಾಜ್ಯಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜು ತಂಡವು ಮೈಸೂರಿನ ಎಂ.ಐ.ಸಿ.ಎ. ತಂಡವನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿತು. ಉತ್ತಮ ಕ್ರೀಯಾಶೀಲ ಆಟಗಾರ ಪ್ರಶಸ್ತಿಯನ್ನು ಎಂ.ಐ.ಸಿ.ಎ. ತಂಡದ ಶತಜೀತ್, ಅತ್ಯಂತ ಮೌಲ್ಯಾಧಾರಿತ ಆಟಗಾರ ಪ್ರಶಸ್ತಿಯನ್ನು ಪಿ.ಇ.ಎಸ್. ಕಾಲೇಜಿನ ಆನೋಚ್, ಬೆಸ್ಟ್ ಶೂಟರ್ ಪ್ರಶಸ್ತಿಯನ್ನು ವಿಜಯ್, ಉತ್ತಮ ಆಲ್‍ರೌಂಡರ್ ಪ್ರಶಸ್ತಿಯನ್ನು ಪಿ.ಇ.ಎಸ್. ಕಾಲೇಜಿನ ಸೃಜನ್ ಹಾಗೂ ರಕ್ಷಣಾತ್ಮಕ ಆಟಗಾರ ಪ್ರಶಸ್ತಿಯನ್ನು ವೀರಾಜಪೇಟೆ ಪದವಿ ಕಾಲೇಜಿನ ಕಿರಣ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ, ಬಡಕಡ ದೀನ ಪೂವಯ್ಯ, ವೀರಾಜಪೇಟೆಯ ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆÉ ಎಂ. ದೇಚಮ್ಮ ಹಾಗೂ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಎ.ಎಂ. ಕಮಲಾಕ್ಷಿ ಉಪಸ್ಥಿತರಿದ್ದರು.

ಹಾಕಿ ಪಂದ್ಯಾವಳಿಯ ತೀರ್ಪು ಗಾರರಾಗಿ ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್ ಹಾಗೂ ಬೊಳ್ಳಚಂಡ ನಾಣಯ್ಯ, ಬಾಸ್ಕೆಟ್‍ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ರಾಜರಾಯ್, ಇರ್ಷಾದ್ ಹಾಗೂ ಅಶ್ವಿನ್ ಕಾರ್ಯನಿರ್ವಹಿಸಿದರು.