ವೀರಾಜಪೇಟೆ, ಮಾ: 31: ವೀರಾಜಪೇಟೆಯ ಅರಸುನಗರದ ಮುತ್ತಪ್ಪ ದೇವಾಲಯದ ವತಿಯಿಂದ ದೇವರ ತೆರೆ ಮಹೋತ್ಸವ ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ನಡೆಯಿತು.

ತಾ. 30 ರಂದು ಮುತ್ತಪ್ಪ ದೇವರ ವೆಳ್ಳಾಟಂನೊಂದಿಗೆ ತೆರೆ ಉತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ ಗುಳಿಗನ ವೆಳ್ಳಾಟಂ ಹಾಗೂ ಪದ್ಧತಿ ಪ್ರಕಾರದ ಪೂಜಾ ಸೇವೆಗಳು ನಡೆದವು. ಬಳಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

ತಾ. 31 ರಂದು ಪ್ರಾತಃಕಾಲ 3.30 ಗಂಟೆಗೆ ಗುಳಿಗನ ತೆರೆ ನಂತರ ಮುತ್ತಪ್ಪ ಹಾಗೂ ತಿರುವಪ್ಪನ ಕೋಲ ನಡೆಯಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ, ಹಾಗೂ ಸದಸ್ಯರುಗಳು ಹಾಜರಿದ್ದರು.