ಗೋಣಿಕೊಪ್ಪ ವರದಿ, ಮಾ. 30: ಪ್ರೊಫೇಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘದ ಕೊಡಗು ಘಟಕದ ಸದಸ್ಯತ್ವ ಅಭಿಯಾನಕ್ಕೆ ಪೊನ್ನಂಪೇಟೆಯಲ್ಲಿ ಚಾಲನೆ ನೀಡಲಾಯಿತು. ಕಚೇರಿ ಸಭಾಂಗಣದಲ್ಲಿ ಸದಸ್ಯತ್ವ ಅರ್ಜಿ ನೀಡುವ ಮೂಲಕ ಚಾಲನೆ ನೀಡಲಾಯಿತು. ಹೊಸ ಸದಸ್ಯರಿಗೆ ಅರ್ಜಿ ಹಸ್ತಾಂತರವನ್ನು ರೈತ ಮುಖಂಡರುಗಳಾದ ಚಿಮ್ಮಂಗಡ ಗಣೇಶ್, ಕಳ್ಳಿಚಂಡ ಧನು ಮಾಡಿದರು.

ಚಿಮ್ಮಂಗಡ ಗಣೇಶ್ ಮಾತನಾಡಿ, ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ಪ್ರೊಫೇಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರೈತ ಸಂಘದ ಕೊಡಗು ಘಟಕ ಸ್ಥಾಪನೆಗೆ ನಿರ್ಧರಿಸಲಾಗಿದೆ. ಇದರಂತೆ ಸದಸ್ಯತ್ವ ಹೆಚ್ಚಿಸುವ ಮೂಲಕ ಉದ್ಘಾಟನೆಗೆ ಸಿದ್ದತೆ ನಡೆಸಲಾಗುತ್ತಿದೆ. ರೈತಪರ ಹೋರಾಟಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನ್ಯಾಯ ದೊರಕಿಸುವಲ್ಲಿ ಮುತುವರ್ಜಿ ವಹಿಸಲಾಗುವದು ಎಂದರು. ಈ ಸಂದರ್ಭ ಗುಡಿಯಂಗಡ ಪೂವಪ್ಪ, ಚಂಗುಲಂಡ ರಾಜಪ್ಪ, ಪೊಯ್ಲೇಂಗಡ ಗೋಪಾಲ್, ಬೊಜ್ಜಂಗಡ ಚೆಂಗಪ್ಪ, ಕೋಟ್ರಂಗಡ ಹರೀಶ್, ಬಾದುಮಂಡ ಮಹೇಶ್, ಪೆಮ್ಮಂಡ ನರೇಶ್ ಹಾಗೂ ಚೆಪ್ಪುಡೀರ ಮಹೇಶ್ ಇದ್ದರು.