ಮಡಿಕೇರಿ, ಮಾ. 28: ವೀರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಅರಿವು ಕಾರ್ಯಕ್ರಮ ನಡೆಯಿತು. ಅರಿವು ಕಾಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯ ಅಪ್ತ ಸಮಲೋಚಕ ಚಿಟಿಯ್ಯಪ್ಪ ಅವರು ಆಗಮಿಸಿ ಏಡ್ಸ್ ನಿಯಂತ್ರಣ ಹಾಗೂ ತೊಂದರೆಗಳ ಕುರಿತು ಮಾಹಿತಿ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳಾದ ಪ್ರೊ. ಆನಂದ ಕಾರ್ಲ ಹಾಗೂ ನಾಗರಾಜು ಹಾಜರಿದ್ದರು.