ಸೋಮವಾರಪೇಟೆ, ಮಾ. 28: ತಾಲೂಕು ಪಂಚಾಯಿತಿ ಮತ್ತು ತಾಲೂಕು ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಮತದಾನ ಅರಿವು ಕಾರ್ಯಾಗಾರ ನಡೆಯಿತು. ಸೆಕ್ಟರ್ ಅಧಿಕಾರಿ ಶ್ರೀಕಾಂತ್ ಮತದಾನದ ಮಹತ್ವ ಹಾಗೂ ವಿವಿ ಪ್ಯಾಟ್ ಮತ್ತು ಬ್ಯಾಲೆಟ್ ಯೂನಿಟ್ ಬಗೆಗಿನ ಮಾಹಿತಿ ನೀಡಿದರು. ಇಲಾಖೆಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಪ್ರಾಯೋಗಿಕ ಮತದಾನ ಮಾಡಿದರು. ತಾ.ಪಂ. ಪ್ರಬಾರ ಕಾರ್ಯನಿರ್ವಹಣಾಧಿಕಾರಿ ಸುನಿಲ್, ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಉಪಸ್ಥಿತರಿದ್ದರು.