ಗೋಣಿಕೊಪ್ಪ ವರದಿ, ಮಾ. 28: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ತಾ. 29 ರಿಂದ 31 ರವರೆಗೆ ನಡೆಯಲಿದೆ.

ತಾ. 29 ರಂದು ಬೆಳಿಗ್ಗೆ 5 ಗಂಟೆಗೆ ಪ್ರತಿಷ್ಠಾ ದಿನಾಚರಣೆ ಪೂಜೆ, ಬೆಳಿಗ್ಗೆ 8 ಹಾಗೂ ಸಂಜೆ 6 ಕ್ಕೆ ಮುತ್ತಪ್ಪನ್ ವೆಳ್ಳಾಟಂ ನಡೆಯಲಿದೆ. ತಾ. 30 ರಂದು ಸಂಜೆ 6 ರಿಂದ ತಡರಾತ್ರಿವರೆಗೆ ಮುತ್ತಪ್ಪ ದೇವರ ತೆರೆ, ಕಾರಣೋರ್ ವೆಳ್ಳಾಟಂ, ಮುತ್ತಪ್ಪನ್ ವೆಳ್ಳಾಟಂ, ಗುಳಿಗನ್, ಕಂಡಾಕರ್ಣನ್, ವಸೂರಿಮಾಲಾ, ವಿಷ್ಣುಮೂರ್ತಿ, ಪೋದಿ, ತಿರುವಪ್ಪನ ವೆಳ್ಳಾಟಂ ಹಾಗೂ ಕಳಸ ಸ್ವಾಗತಂ ನಡೆಯಲಿದೆ.

ತಾ. 31 ರಂದು ಮಧ್ಯಾಹ್ನ 2 ರಿಂದ ಗುಳಿಗನ್ ತೆರೆ, ಕಂಡಾಕರ್ಣನ್ ತೆರೆ, ತಿರುವಪ್ಪನ್, ಪೋದಿ, ಕಾರಣೀರ್‍ತೆರೆ, ವಸೂರಿಮಾಲಾ ಹಾಗೂ ವಿಷ್ಣುಮೂರ್ತಿ ತೆರೆ ನಡೆಯಲಿದೆ ಎಂದು ಟ್ರಸ್ಟ್ ಪ್ರಕಟಣೆ ತಿಳಿಸಿದೆ.