ಗೋಣಿಕೊಪ್ಪ ವರದಿ, ಮಾ. 27 : ರಸ್ತೆ ಬದಿಯಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದ ಸಂದರ್ಭ ಜೀಪ್ ಹರಿದು ಇಬ್ಬರು ಪೌರಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ಪೊನ್ನಂಪೇಟೆಯಲ್ಲಿ ನಡೆದಿದೆ. ಒಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಮತ್ತೊಬ್ಬ ಗಾಯಾಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ.

ಪೊನ್ನಂಪೇಟೆ ಪೌರ ಕಾರ್ಮಿಕರುಗಳಾದ ಉಮಾ (32) ಹಾಗೂ ನಾಗಿ (28) ಗಾಯಗೊಂಡವರು. ಉಮಾ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ಕೋಮಾ ಸ್ಥಿತಿಯಲ್ಲಿ ನಿಗಾ ಘಟಕದಲ್ಲಿದ್ದಾರೆ. ನಾಗಿ ಚೇತರಿಕೆಗೊಳ್ಳುತ್ತಿದ್ದಾರೆ.

ಬುಧವಾರ ಬೆಳಗ್ಗೆ ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನ ಎದುರು ರಸ್ತೆ ಬದಿಯಲ್ಲಿ ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ಹಿಂಬದಿ ರಸ್ತೆಯಿಂದ ಬಂದ ಜೀಪ್ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‍ಗೆ ಡಿಕ್ಕಿಯಾಗಿ ಕಾರ್ಮಿಕರ ಮೇಲೆ ಹರಿದಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮೈಸೂರು ಜೆಎಸ್‍ಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಚಾಲಕನ ಪತ್ತೆಗೆ ಪೊನ್ನಂಪೇಟೆ ಪೊಲೀಸರು ಮುಂದಾಗಿದ್ದಾರೆ. -ಸುದ್ದಿಪುತ್ರ