ಮಡಿಕೇರಿ, ಮಾ. 27: ಏ. 5 ರಿಂದ 11ರವರೆಗೆ ಶ್ರೀ ತಲಕಾವೇರಿ ದೇವಾಲಯದಲ್ಲಿ ಜರುಗುವ ಅಷ್ಟಬಂಧ ಬ್ರಹ್ಮಕಲಶ ಪ್ರತಿಷ್ಠಾಪನಾ ಕಾರ್ಯಕ್ರಮದ ಪೂರ್ವ ಸಿದ್ಧತೆಗಳ ಬಗ್ಗೆ ಚರ್ಚಿಸಲು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಅಧ್ಯಕ್ಷತೆಯಲ್ಲಿ ತಾ. 30 ರಂದು ಭಗಂಡೇಶ್ವರ ದೇವಾಲಯ ಅನ್ನಛತ್ರದಲ್ಲಿ ಬೆಳಿಗ್ಗೆ 10.30 ಗಂಟೆಗೆ ಸಭೆ ಏರ್ಪಡಿಸಲಾಗಿದೆ.