ಆರೋಪಿಗಳು ಪರಾರಿ

ಶನಿವಾರಸಂತೆ, ಮಾ. 27: ಶನಿವಾರಸಂತೆ ಸಮೀಪದ ಅವರೆದಾಳು ಗ್ರಾಮದ ಶಿವಯ್ಯ ಎಂಬಾತ ತನಗೆ ಸೇರಿದ ಹುಲುಕೋಡು ಗ್ರಾಮದ ಕಾಫಿ ತೋಟದಲ್ಲಿ ಸರಕಾರದ ಪರವಾನಿಗೆ ಇಲ್ಲದೆ ಅಕ್ರಮವಾಗಿ ಹೊನ್ನೆ ಮರವನ್ನು ಕಡಿದು ನಾಟಗಳನ್ನಾಗಿ ಮಾಡುತ್ತಿದ್ದ ವೇಳೆ ಶನಿವಾರಸಂತೆ ಪೊಲೀಸರು ಧಾಳಿ ಮಾಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ಮರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.