ಪೊನ್ನಂಪೇಟೆ, ಮಾ. 26: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವೀರಾಜಪೇಟೆ ಯುವ ರೆಡ್‍ಕ್ರಾಸ್ ಘಟಕದ ವಿದ್ಯಾರ್ಥಿಗಳಾದ ಶಿವಾಜಿ ಮಂದಣ್ಣ, ದ್ವಿತೀಯ ಬಿ.ಬಿ.ಎ ಮತ್ತು ತಮ್ಮಯ್ಯ,ದ್ವಿತೀಯ ಬಿ.ಕಾಂ ಇವರು ಹಂಪಿಯಲ್ಲಿ ನಡೆಯುತ್ತಿರುವ ರಾಷ್ಟ್ರ ಮಟ್ಟದ ಯುವ ರೆಡ್ ಕ್ರಾಸ್ ತರಬೇತಿ ಶಿಬಿರಕ್ಕೆ ಕೊಡಗು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ. ಈ ಶಿಬಿರದಲ್ಲಿ ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ತುರ್ತು ಪರಿಸ್ಥಿತಿಯ ನಿರ್ವಹಣೆ ಮುಂತಾದ ವಿಚಾರದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.