ಶನಿವಾರಸಂತೆ, ಮಾ. 26: ಶನಿವಾರಸಂತೆ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ 16 ಮಂದಿ ವಾಹನ ಚಾಲಕರಿಗೆ ನ್ಯಾಯಾಲಯ ಒಟ್ಟು ರೂ. 33,000 ದಂಡ ವಿಧಿಸಿದೆ.

ಶನಿವಾರಸಂತೆ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರನ್ನು ಆಲ್ಕೊಮೀಟರ್ ಮೂಲಕ ಪತ್ತೆ ಹೆಚ್ಚಿದ ಪೊಲೀಸರು, ಸುಂಡಳ್ಳಿಯ ಸುಬ್ರಮಣಿ, ಅಪ್ಪಶೆಟ್ಟಳ್ಳಿಯ ಎ.ಎಸ್. ನಾಗೇಶ್, ಕಣಗಾಲು ಗ್ರಾಮದ ಸೋಮಶೇಖರ್, ಶನಿವಾರಸಂತೆಯ ಶಿವಾಜಿ, ತ್ಯಾಗರಾಜ ಕಾಲೋನಿಯ ಶಿವಕುಮಾರ್, ಮಾಗ್ಲು ಗ್ರಾಮದ ಪ್ರಸನ್ನ, ಹಗಡಳ್ಳಿ ಗ್ರಾಮದ ಸಂಪತ್, ಹೆಮ್ಮನೆ ಗ್ರಾಮದ ವಿಜಯಕುಮಾರ್, ಹೊಸಕೆರೆಯ ಶಿವ, ಬಲ್ಲೂರು ರಾಜು, ಖ್ಯಾತನಹಳ್ಳಿಯ ಸೋಮಶೇಖರ್, ಮೆಣಸ ಬೆಟ್ಟದಹಳ್ಳಿಯ ಮಂಜು, ಶಾಂತವೇರಿ ರಾಜು, ದೊಡ್ಡಬಿಳಹದ ರಮೇಶ್, ತೋಯಳ್ಳಿ ಗ್ರಾಮದ ವೇದಮೂರ್ತಿ, ಸೋಮವಾರಪೇಟೆ ಎಂ.ಡಿ. ಬ್ಲಾಕ್‍ನ ಸಂದೀಪ್ ಅವರುಗಳ ವಾಹನಗಳನ್ನು ವಶಪಡಿಸಿಕೊಂಡು ಐಎಂವಿ ಪ್ರಕರಣ ದಾಖಲಿಸಿ ನೋಟೀಸ್ ನೀಡಿದ್ದಾರೆ. ಚಾಲಕರುಗಳು ಸೋಮವಾರಪೇಟೆ ನ್ಯಾಯಾಲಯಕ್ಕೆ ಹಾಜರಾಗಿ ಒಟ್ಟು ರೂ. 33,000 ದಂಡ ಪಾವತಿಸಿ ಶನಿವಾರಸಂತೆ ಪೊಲೀಸ್ ಠಾಣಾ ಸರಹದ್ದಿನಲ್ಲಿದ್ದ ತಮ್ಮ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಿ.ಎಂ. ತಿಮ್ಮಶೆಟ್ಟಿ, ಸಿಬ್ಬಂದಿಗಳಾದ ಪ್ರದೀಪ್‍ಕುಮಾರ್, ಪಾಟೀಲ್, ಹರೀಶ್, ಬೋಪಣ್ಣ, ಶಫೀರ್, ಶಿವಣ್ಣ, ಶಿವಲಿಂಗ, ಶಶಿ, ಸವಿತಾ, ಸೋನಿ, ಮಹೇಶ್, ರಘು ಪಾಲ್ಗೊಂಡಿದ್ದರು.