ಮಡಿಕೇರಿ, ಮಾ. 9: ಗಾಳಿಬೀಡು ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀಶಕ್ತಿ ಗಣಪತಿ ದೇವಾಲಯಕ್ಕೆ ಮಾಜಿ ಸೈನಿಕ ಹಾಗೂ ಹಾಲಿ ಅರಣ್ಯ ಇಲಾಖೆಯ ನೌಕರ ಕೋಚನ ಅನಿಲ್ ಅವರು ತಮ್ಮ ತಂದೆ ದಿ.ಕೋಚನ ಬಸಪ್ಪ ಅವರ ಜ್ಞಾಪಕಾರ್ಥವಾಗಿ 61 ಸಾವಿರ ರೂ.ಗಳ ಚೆಕ್‍ನ್ನು ದೇವಾಲಯದ ಜೀರ್ಣೋದ್ಧಾರ ಸಮಿತಿಗೆ ಹಸ್ತಾಂತರಿಸಿದರು.