ಮಡಿಕೇರಿ,ಮಾ.8: ಸುತ್ತಲೂ ಕಣ್ಣು ಹಾಯಿಸಿದತ್ತಲೆಲ್ಲ ಹಸಿರುವನಸಿರಿಗಳಿಂದ ಕಂಗೊಳಿಸುವ ಬೆಟ್ಟದ ಸಾಲುಗಳು. ನಡುವೆ ವಿಶಾಲ ವಾದ ಮೈದಾನ.., ಮೈದಾನದಲ್ಲಿ ಪುಟಾಣಿಗಳಿಂದ ಹಿಡಿದು ಮಹಿಳೆಯರು, ವೃದ್ಧರಾದಿಯಾಗಿ ಆಡಿ, ಹಾಡಿ ನಲಿದು ಸಂಭ್ರಮಿ ಸಿದರು.., ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗಾಳಿಬೀಡಿನ ಸ್ನೇಹಿತರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಏರ್ಪಡಿಸ ಲಾಗಿದ್ದ “ ಅರೆಭಾಷೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ” ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ಜಾತಿ, ಮತ, ಬೇಧವಿಲ್ಲದೆ ಎಲ್ಲರೂ ಒಂದಾಗಿ ಬೆರೆತು ಸಂಭ್ರಮಿಸಿದರು. ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಾಂಪ್ರದಾಯಿಕ ಮೆರವಣಿಗೆ ಸೊಬಗು ನೀಡಿತು. ಕಳಸ ಹೊತ್ತ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟ್ಟು ಪುರುಷರೊಂದಿಗೆ, ಅತಿಥಿಗಳೂ ಹೆಜ್ಜೆ ಹಾಕಿದರು.
ರಂಗೋಲಿ ಚಿತ್ತಾರ
ಮಹಿಳೆಯರಿಗಾಗಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಬಿಡಿಸಿದರು. ಕಾರ್ಯಕ್ರಮದ ಅಂಗಳದಲ್ಲಿ ಬಣ್ಣದ ಚಿತ್ತಾರ ಹರಡಿದಂತಿತ್ತು.
ಗ್ರಾಮೀಣ ಕ್ರೀಡೆಯ ಸೊಗಡು
ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಗ್ರಾಮೀಣ ಕ್ರೀಡೆಗಳು ಜನಮನ ಸೂರೆಗೊಂಡವು. ಪುಟಾಣಿ ಮಕ್ಕಳಿಗೆ ಏರ್ಪಡಿಸಿದ್ದ ಕೈಕಟ್ಟಿ ಬಿಸ್ಕೆಟ್ ಕಚ್ಚಿ ತಿನ್ನುವ ಸ್ಪರ್ಧೆ ಮನರಂಜನೆ ನೀಡಿತು. ಮಕ್ಕಳೇ ಗಾದೆಗಳನ್ನು ಬರೆದು, ಓದಿ ಬಹುಮಾನ ಗೆದ್ದುಕೊಂಡರು. ಕ್ಯಾಟರ್ ಪಿಲ್ಲರ್ (ಬಿಲ್ಲು) ನಿಂದ ಗುರಿ ನೋಡುವ ಸ್ಪರ್ಧೆ, ಹೆಣ್ಣು ಮಕ್ಕಳ ನೀರು ಚೆಂಬು ಓಟ, ದಂಪತಿಗಳ ಹಾಳೆ ಮೇಲಿನ ಸವಾರಿ ಎಲ್ಲರನ್ನೂ ರಂಜಿಸಿದವು. ಹಳೆ ಕಾಲದ ಪದ್ಧತಿಯ ರುಮಾಲು ಸುತ್ತುವ ಸ್ಪರ್ಧೆ ಸವಾಲಾಗಿದ್ದಿತು. ಹೆಂಗಸರು ಹಾಡನ್ನು ಹಾಡಿ ಗೆದ್ದರು.
ಭಾಷಾ ಸಾಮರಸ್ಯವಿರಲಿ
ಕಾರ್ಯಕ್ರಮವನ್ನು ನಿವೃತ್ತ ಡಿವೈಎಸ್ಪಿ ಯಾಲದಾಳು ಡಿ. ಕೇಶವಾನಂದ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಭಾಷೆ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ. ಭಾಷೆ ಬೆಳೆಸುವÀ ಸಲುವಾಗಿ ಅಕಾಶವಾಣಿಯಲ್ಲಿ ಅರೆಭಾಷೆ ವಾರ್ತೆ ಅರಂಭಿಸಿದ್ದು. ಇದಕ್ಕೆ ಅಕಾಡೆಮಿ ಪ್ರೋತ್ಸಾಹ ನೀಡುತ್ತಿರುವದು ಶ್ಲಾಘನೀಯವೆಂದರು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿದ್ದ ಶಾಸಕ ಕೊಂಬಾರನ ಬೋಪಯ್ಯ ಅವರು ಮಾತನಾಡಿ ಭಾಷಾ ಬೆಳವಣಿಗೆಯೊಂದಿಗೆ ಸಾಮರಸ್ಯವಿರಬೇಕು. ಮಾತೃ ಭಾಷೆಯನ್ನು ಮರೆಯಬಾರದು. ಅದರೊಂದಿಗೆ ಇತರ ಭಾಷೆಗಳನ್ನೂ ಗೌರವಿಸಬೇಕೆಂದರು. ಅಕಾಡೆಮಿ ಸ್ಥಾಪನೆಯಾದ ಬಳಿಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳಾಗಿವೆ. ಭಾಷೆಯೊಂದಿಗೆ ಕಲೆ, ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕಾರ್ಯವಾಗ ಬೇಕಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಪಿ.ಸಿ. ಜಯರಾಮ್ ಅವರು ಮಾತನಾಡಿ ಎಲ್ಲರ ಸಹಕಾರ ದೊಂದಿಗೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳು ವಂತಾಗಬೇಕು. ನಾವು ನಮ್ಮ ಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು. ಇತರರಿಗೂ ಕಲಿಸುವದರೊಂದಿಗೆ ಭಾಷಾ ಸಾಮರಸ್ಯ ಮೂಡಿಸಬೇಕೆಂದು ಹೇಳಿದರು. ಸುಳ್ಯದ ನೆಹರು ಸ್ಮಾರಕ ಪದವಿ ಕಾಲೇಜಿನ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ.. ಕಿಡ್ಡಾಸ ಹಬ್ಬದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯತಂಡ ಸುಭಾಷ್ ಸೋಮಯ್ಯ, ಉಪಾಧ್ಯಕ್ಷೆ ಬದಲೇರ ರಾಣಿ ಮುತ್ತಣ್ಣ, ಸುಭಾಷ್ಚಂದ್ರ ಅಳ್ವ, ಏಲಕ್ಕಿ ಮಾರಾಟ ಸಂಘದ ಉಪಾಧ್ಯಕ್ಷ ಕೋಳುಮುಡಿಯನ ಆರ್. ಅನಂತಕುಮಾರ್, ಧವಸಭಂಡಾರದ ಅಧ್ಯಕ್ಷ ಕೊಂಬಾರನ ಪಿ. ಲಿಂಗರಾಜು, ಮಹಿಳಾ ಸಮಾಜದ ಅಧ್ಯಕ್ಷೆ ಅಚ್ಚಪಟ್ಟೀರ ಜಿ. ಕವಿತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ಯಾಲದಾಳು ಪದ್ಮಾವತಿ, ತಾಲೂಕು ಪಂ. ಸದಸ್ಯ ಮುದ್ದಂಡ ರಾಯ್ ತಮ್ಮಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್ ಸೋಮಣ್ಣ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಪಿ. ಜಯಾನಂದ, ಕೊಡಗು ಗೌಡ ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ ಮಾದಪ್ಪ, ವಕೀಲ ಡಾ. ಯಾಲದಾಳು ಮನೋಜ್ ಬೋಪಯ್ಯ, ಅಕಾಡೆಮಿ ಮಾಜಿ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ, ಗೌಡ ಸಮಾಜದ ನಿರ್ದೇಶಕಿ ಉಳುವಾರನ ಅಮೃತ ಸುರೇಶ್, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರುಗಳಾದ ಕಡ್ಲೇರ ತುಳಸಿ ಮೋಹನ್, ಕುಂಬುಗೌಡನ ಪ್ರಸನ್ನ, ದಿನೇಶ ಹಾಲೆಮಜಲು, ಬಾರಿಯಂಡ ಜೋಯಪ್ಪ, ಕಾನೆಹಿತ್ಲ್ ಮೊಣ್ಣಪ್ಪ, ಕೋಳುಮುಡಿಯನ ಎ. ಮೋಹನ್, ಕರಕರನ ಎಸ್. ಪವನ್ ಇದ್ದರು. ರಾತ್ರಿ ಸಾಂಸ್ಕøತಿಕ ಕ್ರಾರ್ಯಕ್ರಮಗಳು ಗಮನ ಸೆಳೆದವು.