ಪೆರಾಜೆ, ಮಾ. 5: ಯುವ ಕೋಟೆ ಯುವಕ ಮಂಡಲ ಪುತ್ಯ ಪೆರಾಜೆ ಇದರ ವತಿಯಿಂದ ಮಾರ್ಚ್ ತಿಂಗಳ ಶ್ರಮದಾನವು ಯಾಪಾರೆ ಗಡಿಯಿಂದ ಯುವ ಕೋಟೆವರೆಗಿನ ರಸ್ತೆಯಲ್ಲಿ ಇದ್ದ ಗುಂಡಿ ಮುಚ್ಚುವ ಕೆಲಸದ ಮೂಲಕ ಯಶಸ್ವಿಗೊಳಿಸಲಾಯಿತು.

ಈ ಕಾರ್ಯದಲ್ಲಿ ಯುವಕ ಮಂಡಲದ ಅಧ್ಯಕ್ಷ ಲಿಖಿತ್ ಅಡ್ಕ, ಕಾರ್ಯದರ್ಶಿ ಕೌಶಿಕ್ ತೊಕ್ಕುಳಿ, ಖಜಾಂಜಿ ಶ್ರೀಕಾಂತ್ ಯಾಪಾರೆ ಹಾಗೂ ಯುವಕಮಂಡಲದ ಸದಸ್ಯರು ಭಾಗವಹಿಸಿದ್ದರು.

ಶ್ರಮದಾನದಲ್ಲಿ ಭಾಗವಹಿಸಿದ ಸದಸ್ಯರಿಗೆ ತಂಪು ಪಾನೀಯದ ವ್ಯವಸ್ಥೆಯನ್ನು ರವಿ ಬಂಗಾರಕೋಡಿ, ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಯಾಪಾರೆ ಜತ್ತಪ್ಪ ಅವರ ಮನೆಯಲ್ಲಿ ಮಾಡಲಾಯಿತು.