ಮಡಿಕೇರಿ, ಮಾ. 6: ಕರ್ನಾಟಕ ಉಚ್ಚ ನ್ಯಾಯಾಲಯ ದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ:17690/2018ರಂತೆ ಮಡಿಕೇರಿ ಅರಣ್ಯ ವಲಯ ವ್ಯಾಪ್ತಿಯಲ್ಲಿರುವ ಈಸ್ಟ್ ಮೀಸಲು ಅರಣ್ಯದ ಗಡಿ ಮತ್ತು ಡಿನೋಟಿಫಿಕೇಷನ್ ಪ್ರದೇಶದ ಗುರುತಿಸುವಿಕೆ ಕಾರ್ಯದ ಹಿನ್ನೆಲೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿಯಾಗಿ ತಾ. 7ರಿಂದ ಮಡಿಕೇರಿ ನಗರಸಭಾ ವ್ಯಾಪ್ತಿಯ ಚೈನ್‍ಗೇಟ್‍ನಿಂದ ಗೌಡ ಸಮಾಜ ರಸ್ತೆಗಾಗಿ ಕನ್ನಂಡಬಾಣೆ ರಸ್ತೆಗಾಗಿ ಸರ್ವೆ ಕಾರ್ಯ ಪ್ರಾರಂಭಿಸಲಾಗುತ್ತಿದೆ.

ಸರ್ವೆ ಕಾರ್ಯದಲ್ಲಿ ಹಾದು ಹೋಗುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಸಹಕರಿಸುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.