ಕುಶಾಲನಗರ, ಫೆ. 26: ಕುಶಾಲನಗರ ಇಗ್ಗುತ್ತಪ್ಪ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಸಹಾಯಧನ ವಿತರಿಸ ಲಾಯಿತು. ಸೂರ್ಲಬ್ಬಿ, ಹಮ್ಮಿಯಾಲ ಮತ್ತಿತರ ವ್ಯಾಪ್ತಿಯ 40 ಮಂದಿ ಸಂತ್ರಸ್ತರಿಗೆ ಒಟ್ಟು 6 ಲಕ್ಷ ರೂ.ಗಳ ಚೆಕ್ ವಿತರಣೆ ನಡೆಯಿತು.

ಕುಶಾಲನಗರದ ಗಂಧದಕೋಟೆ ಯಲ್ಲಿರುವ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಲಾ ರೂ. 15 ಸಾವಿರದಂತೆ ಫಲಾನುಭವಿಗಳಿಗೆ ನೀಡಲಾಯಿತು.

ಅಸೋಸಿಯೇಷನ್ ಅಧ್ಯಕ್ಷ ಕರ್ನಂಡ ಅರಣ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ ಅಪ್ಪಣ್ಣ, ಪತ್ರಕರ್ತರಾದ ಮಹೇಶ್ ನಾಚಯ್ಯ, ಅಪ್ಪಚ್ಚೆಟರಂಡ ಶಾಂತಿ ಕಾವೇರಪ್ಪ ಪಾಲ್ಗೊಂಡಿದ್ದರು.

ಉಪಾಧ್ಯಕ್ಷ ಸೋಮೆಯಂಡ ಪೂವಯ್ಯ, ಕಾರ್ಯದರ್ಶಿ ಮೇವಡ ಮಧು, ಸಹ ಕಾರ್ಯದರ್ಶಿ ಮಣವಟ್ಟಿರ ಸಂತೋಷ್, ಕ್ರೀಡಾ ಕಾರ್ಯದರ್ಶಿ ಮಾಲೆಟಿರ ಪೂಣಚ್ಚ ಇದ್ದರು.

ವಾಂಚಿರ ಮನು ಸ್ವಾಗತಿಸಿದರು, ಚೋವಂಡ ಅನಿತಾ ಪ್ರಾರ್ಥನೆ, ಮೂವೇರ ಗಣೇಶ್ ಮತ್ತು ಮೇವಡ ಮಧು ಮಾದಯ್ಯ ಅವರು ಕಾರ್ಯಕ್ರಮ ನಿರೂಪಿಸಿ ಸೋಮೆಯಂಡ ಪೂವಯ್ಯ ವಂದಿಸಿದರು.