ವೀರಾಜಪೇಟೆ, ಫೆ. 23: ವೀರಾಜಪೇಟೆಯಲ್ಲಿ ನೂತನ ಹೈಟೆಕ್ ಜೈಲ್‍ಗೆ ಭೂಮಿ ಪೂಜೆಯನ್ನು ಶಾಸಕ ಬೋಪಯ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅನೇಕ ವರ್ಷಗಳಿಂದ ಸಬ್‍ಜೈಲ್ ಕಟ್ಟಡ ಜಖಂಗೊಂಡ ಕಾರಣ ಇಲ್ಲಿನ ಖೈದಿಗಳನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿತ್ತು. ಮುಂದಿನ ಒಂದು ವರ್ಷದಲ್ಲಿಯೇ ಹೈಟೆಕ್ ಸಬ್‍ಜೈಲ್ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲಿದೆ. ಗುಣ ಮಟ್ಟವನ್ನು ಕಾಪಾಡಿಕೊಂಡು ಕಾಮಗಾರಿ ನಿರ್ವಹಿಸಬೇಕು ಎಂದರು.

ಗಾಂಧಿನಗರದ ಹಿಂದಿನ ಸಬ್‍ಜೈಲ್ ವಸತಿ ಗೃಹದಲ್ಲಿಯೇ ಭೂಮಿ ಪೂಜೆ ನೆರವೇರಿಸಲಾಗಿದ್ದು ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಬಿ.ಎಂ.ಗೋವಿಂದರಾಜು, ಮುಖ್ಯಾಧಿಕಾರಿ ಶ್ರೀಧರ್, ವೃತ್ತ ನಿರೀಕ್ಷಕ ಕ್ಯಾತೇಗೌಡ, ಪಟ್ಟಣ ಪಂಚಾಯಿತಿ ಸದಸ್ಯೆ ಸುನೀತಾ ಜೂನಾ, ಜೈಲ್ ಅಧಿಕಾರಿ, ಸಿಬ್ಬಂದಿ, ಮತ್ತಿತರರು ಹಾಜರಿದ್ದರು.