ಮಡಿಕೇರಿ, ಫೆ. 21 : ವಿಕಲಚೇತನ ಇಲಾಖೆಯ ರಾಜ್ಯ ಆಯುಕ್ತರಾದ ವಿ.ಎಸ್.ಬಸವರಾಜು ಅವರು ತಾ. 23 ರಂದು ಬೆಳಿಗ್ಗೆ 9.30 ಯಿಂದ 11 ಗಂಟೆಗೆವರೆಗೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಂತರ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಅಂಗವಿಕಲರ ಹಕ್ಕುಗಳ ರಕ್ಷಣೆ ಕುರಿತು, ಶೇ.5 ರಷ್ಟು ಆಯವ್ಯಯ ಖರ್ಚು ಹಾಗೂ 2018-19ರ ಕ್ರಿಯಾ ಯೋಜನೆ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ ಎಂದು ಸಹಾಯಕ ಆಯುಕ್ತರು ತಿಳಿಸಿದ್ದಾರೆ.