ಸುಂಟಿಕೊಪ್ಪ, ಫೆ. 21: ಸುಂಟಿಕೊಪ್ಪ ಆಟೋ ಚಾಲಕ ಸಂಘದ ವತಿಯಿಂದ ಮಾದಾಪುರದ ಆಟೋ ಚಾಲಕ ಶಫೀಕ್ ಎಂಬವರಿಗೆ ಕ್ಯಾನ್ಸರ್ ಕಾಯಿಲೆಯ ಚಿಕಿತ್ಸೆಗಾಗಿ ಧನ ಸಹಾಯ ನೀಡಲಾಯಿತು.

ಶಫೀಕ್ ಗಂಟಲು ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆ ವೆಚ್ಚವಾಗಿ ಸುಂಟಿಕೊಪ್ಪ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿಂದ ರೂ. 10 ಸಾವಿರ ಧನ ಸಹಾಯ ನೀಡಲಾಯಿತು. ಈ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ ಬಿ.ಕೆ. ಪ್ರಶಾಂತ್ (ಕೋಕ) ಕಾರ್ಯದರ್ಶಿ ಜೇಮ್ಸ್, ಮಾಜಿ ಅಧ್ಯಕ ಸಂತೋಷ್ (ದಿನು) ನಿರ್ದೇಶಕರಾದ ನಾರಾಯಣ, ಫೆಲಿಕ್ಸ್ ಇದ್ದರು.