ಚೆಟ್ಟಳ್ಳಿ, ಫೆ. 20: ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ಧಾಳಿ ನಡೆಸಿ ಭಾರತೀಯ ಸಿ.ಆರ್.ಪಿ.ಎಫ್. ಯೋಧರನ್ನು ಹತ್ಯೆ ಮಾಡಿರುವದನ್ನು ವಿರೋಧಿಸಿ ಕುಶಾಲನಗರದಲ್ಲಿ ಕೊಡಗು ಜಿಲ್ಲಾ ಎಸ್.ಎಸ್.ಎಫ್. ಸಮಿತಿ ವತಿಯಿಂದ ಖಂಡನಾ ಸಭೆ ನಡೆಸಿ, ಅಗಲಿದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕುಶಾಲನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಹೀನ ಕೃತ್ಯವನ್ನು ಖಂಡಿಸಿ ಹುತಾತ್ಮ ಯೋಧರ ಆತ್ಮಕ್ಕೆ ಚಿರಶಾಂತಿ ಕೋರಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಎಸ್.ಎಸ್.ಎಫ್.ನ ಸೊಮವಾರಪೇಟೆ ಸೆಕ್ಟರ್ ಅಧ್ಯಕ್ಷರು ಶಾಫಿ ಸಅದಿ ಸೋಮವಾರಪೇಟೆ ಈ ಕುರಿತು ಮಾತನಾಡಿದರು.

ಎಸ್.ಎಸ್.ಎಫ್.ನ ಜಿಲ್ಲಾ ಕಾರ್ಯದರ್ಶಿ ಮುಸ್ತಫ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಸ್ಮಾನ್ ಸೂಫಿ, ಎಸ್.ಎಸ್.ಎಫ್. ಕುಶಾಲನಗರ ಸೆಕ್ಟರ್‍ನ ಕಾರ್ಯದರ್ಶಿ ಮುಹಮ್ಮದ್ ಕೈಝರ್, ಎಸ್.ಎಸ್.ಎಫ್. ಕುಶಾಲನಗರ ಸೆಕ್ಟರ್ ಮಾಜಿ ಅಧ್ಯಕ್ಷರು ಅಬ್ದುಲ್ ರಶೀದ್ ಹಳ್ರಮೀ ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.