ಮಡಿಕೇರಿ, ಫೆ. 19: ಸಮುದಾಯದ ಸೇವೆಗಾಗಿ ಹಾಗೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಯುವ ಜನರನ್ನು ಸಕ್ರೀಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ನೆಹರು ಯುವ ಕೇಂದ್ರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ರಾಷ್ಟ್ರೀಯ ಯುವದಳ ಸೇವಾ ಕಾರ್ಯಕರ್ತರಾಗಿ ಒಂದು ವರ್ಷದ ಅವಧಿಗೆ ಸೇವೆ ಸಲ್ಲಿಸಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸುವಂತಿಲ್ಲ.
18 ರಿಂದ 29 ವರ್ಷದೊಳಗಿರಬೇಕು. ಹತ್ತನೇ ತರಗತಿ ತೇರ್ಗಡೆಯಾಗಿರುವ (ಗರಿಷ್ಠ ಮಿತಿ ಇರುವದಿಲ್ಲ) ಯುವ ಜನರು ಹಾಗೂ ಸಂಘ/ಮಂಡಳಿಯ ಸದಸ್ಯರು ಅರ್ಜಿ ಸಲ್ಲಿಸಬಹುದು. ಪದವಿಪೂರ್ವ, ಪದವೀಧರ ಮಹಿಳೆಯವರಿಗೆ ಆದ್ಯತೆ.
ಆಯ್ಕೆಯಾದ ಸೇವಾ ಕಾರ್ಯಕರ್ತರು ಯುವ ಹಾಗೂ ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಸ್ವಚ್ಛ ಭಾರತ್ ಮಿಷನ್, ಪ್ರಧಾನಮಂತ್ರಿಯ ಜನ್-ಧನ್ ಯೋಜನೆ, ಜಾಗೃತಿ ಆಂದೋಲನ ಹಾಗೂ ಆರೋಗ್ಯ, ಸಾಕ್ಷರತೆ, ಗ್ರಾಮ ನೈರ್ಮಲ್ಯ ಮುಂತಾದ ಕಾರ್ಯಕ್ರಮಗಳನ್ನು ಆಯಾ ತಾಲೂಕುಗಳಲ್ಲಿ ನೆಹರು ಯುವ ಕೇಂದ್ರದ ಮುಂಖಾಂತರ ಅನುಷ್ಠಾನಗೊಳಿಸಬೇಕು. ನೂತನವಾಗಿ ಸಂಘ, ಮಂಡಳಿಗಳನ್ನು ಸಂಸ್ಥಾಪಿಸಬೇಕು.
ಅರ್ಜಿ ಸಲ್ಲಿಸುವವರು ನಿಗದಿತ ಅರ್ಜಿಯನ್ನು ನೆಹರು ಯುವ ಕೇಂದ್ರದ ವೆಬ್ಸೈಟ್ ತಿತಿತಿ.ಟಿಥಿಞs.oಡಿg ಅಥವಾ ತಿತಿತಿ.ಟಿಥಿಞs.ಟಿiಛಿ.iಟಿ ನಿಂದ ಪಡೆದು, ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಾರ್ಚ್ 3 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಯುವಜನ ಸಮನ್ವಯಾಧಿಕಾರಿ, ನೆಹರು ಯುವ ಕೇಂದ್ರ, ಯಶು ನಿಲಯ, ಕಾವೇರಿ ಲೇಔಟ್, ಬ್ಲಾಕ್ ನಂ:8, ಮಡಿಕೇರಿ-571201 ಇವರನ್ನು ದೂರವಾಣಿ ಮುಖಾಂತರ 08272-225470 ಸಂಪರ್ಕಿಸಬಹುದು.