ಮಡಿಕೇರಿ, ಜ. 28: ಮಂಜಿನ ನಗರಿ ಮಡಿಕೇರಿಯಲ್ಲಿ ದೂರದ ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಬೆಂಗಳೂರಿನ ನಗೆಯೋಗ ಒಕ್ಕೂಟದ ಸದಸ್ಯರು ವಿವಿಧ ವೇಷ - ಭೂಷಣಗಳೊಂದಿಗೆ, ಗಹಗಹಿಸಿ ನಗು ನಗುತ್ತಾ ಮೆರವಣಿಗೆ ನಡೆಸಿದರು. ಕನ್ನಡ ಸಂಸ್ಕøತಿ ಇಲಾಖೆ, ಮಡಿಕೇರಿ ಪ್ರಾಯೋಜನೆಯ ದೊಳ್ಳು ಕುಣಿತ, ಕಂಸಾಳೆ ಕಲಾ ತಂಡಗಳಲ್ಲದೆ, ನಗೆ ಕ್ಲಬ್ನ ಮಹಿಳಾ ಸದಸ್ಯರು ಅಕ್ಕಮಹಾದೇವಿ, ಕಿತ್ತೂರು ಚೆನ್ನಮ್ಮ, ಕಾಳಿಯಂತೆ ವೇಷ ಧರಿಸಿ ಮೆರವಣಿಗೆ ರಂಗು ಮೂಡಿಸಿದರು.ಇಂದು ಬೆಳಿಗ್ಗೆ 8.30 ಗಂಟೆಗೆ ಕೊಡಗು ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಜಾಗಟೆ ಬಾರಿಸುವ ಮೂಲಕ ಮತ್ತು ಡೊಳ್ಳು ಬಡಿಯುವ ಮೂಲಕ ನಗು ಮಹಾ ಮೆರವಣಿಗೆಗೆ ಚಾಲನೆ ನೀಡಿದರು. ಕಾವೇರಿ ಕಲಾಕ್ಷೇತ್ರದಿಂದ ಚಾಲನೆಗೊಂಡ ಮೆರವಣಿಗೆ ಮೈಸೂರು ರಸ್ತೆಯಲ್ಲಿ ಸಾಗಿ ಕ್ರಿಸ್ಟಲ್ ಕೋರ್ಟ್ ಹೊಟೇಲ್ ಮುಂಭಾಗ ಅಂತ್ಯವಾಯಿತು.
ವಿವಿಧ ಜಿಲ್ಲೆಯ, ನಗರ ಪ್ರದೇಶದ ನಗೆ ಕ್ಲಬ್ ತಂಡಗಳು ತಮ್ಮ ‘ಬ್ಯಾನರ್’ನೊಂದಿಗೆ ನಗು ನಗುತ್ತಾ ಮಡಿಕೇರಿ ನಗರದ ಜನತೆಗೆ ಮುದ ನೀಡಿದರು. ಹೊರ ಜಿಲ್ಲೆಯ ಅತ್ಯಧಿಕ ಮಹಿಳೆಯರೇ ಉತ್ಸಾಹದಿಂದ ಪಾಲ್ಗೊಂಡಿದ್ದು, ಪುರುಷರೂ ವಿವಿಧ ವೇಷಗಳನ್ನು ಧರಿಸಿ, ಆಹಾಹಾ.., ಓಓಹಾ.., ಎಂದು ನಗುತ್ತಾ ಮೆರವಣಿಗೆಯಲ್ಲಿ ಸಾಗಿದ್ದು, ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ತೀತಿರ ಪುಷ್ಪಾ ಹೊರತು ಪಡಿಸಿದರೆ, ಕೊಡಗಿನ ಸದಸ್ಯರು ಅಷ್ಟಾಗಿ ಕಾಣಲಿಲ್ಲ. ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಅಧ್ಯಕ್ಷ ಪನ್ನಗ ಶಯನ ಅವರು ಮಾತನಾಡಿ, ನಗೆ ಕೂಟಗಳು ಇಲ್ಲದ ಜಿಲ್ಲೆಗಳಲ್ಲಿ ರಾಜ್ಯ ನಗೆ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಮುಂದಿನ ವರ್ಷ ‘ಹಂಪಿ’ಯಲ್ಲಿ ಸಮ್ಮೇಳನ ನಡೆಸುವ ಉದ್ದೇಶವಿದೆ ಎಂದರು. ಮೆರವಣಿಗೆ ಯಲ್ಲಿ ಮಡಿಕೇರಿ ಕನ್ನಡ ಮತ್ತು ಸಂಸ್ಕøತಿ
(ಮೊದಲ ಪುಟದಿಂದ) ಇಲಾಖೆಯ ಮಂಜುನಾಥ್ ಭಾಗವಹಿಸಿದ್ದರು. ರಮೇಶ್ ಚಂದ್ರಶೇಖರ್ ಅವರು ನಿರೂಪಿಸಿದರು.
ಚುನಾವಣೆ ಆಕಾಂಕ್ಷಿಯಲ್ಲ - ಯದುವೀರ್
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮೈಸೂರು ಅರಮನೆಗೆ ಭೇಟಿ ನೀಡಿದ್ದನ್ನು ಪ್ರಸ್ತಾಪಿಸಿದ ಪತ್ರಕರ್ತರಿಗೆ ಮುಂದಿನ ಲೋಕಸಭಾ ಚುನಾವಣೆ ಅಥವಾ ಯಾವದೇ ರಾಜಕೀಯ ಪಕ್ಷದ ಪರವಾಗಿ ಗುರುತಿಸಿಕೊಳ್ಳುವದು ತನಗೆ ಇಷ್ಟವಿಲ್ಲ. ಈಗಾಗಲೇ ಈ ಭೇಟಿ ಔಪಚಾರಿಕವಾದದ್ದು ಹಾಗೂ ಅರಮನೆಯ ಇತಿಹಾಸವನ್ನು ಅಮಿತ್ ಶಾ ತಿಳಿದುಕೊಳ್ಳುವ ಇಂಗಿತ ವ್ಯಕ್ತಪಡಿಸಿದರು ಎಂದು ಮಹಾರಾಜ್ ಯದುವೀರ್ ಉತ್ತರಿಸಿದರು. ದಿ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಶಸ್ತಿ ನೀಡುವ ಬಗ್ಗೆ ನಿಮ್ಮ ನಿಲವು ಏನು? ಎಂದು ಕೇಳಲಾದ ಪ್ರಶ್ನೆಗೆ ‘ಭಾರತ ರತ್ನ’ ನೀಡುವದು ಸರ್ಕಾರದ ಕೆಲಸ. ಕೊಡಗಿನ ವೀರ ಯೋಧರ ಬಗ್ಗೆ ಗೌರವವಿದೆ, ಅಭಿಮಾನವಿದೆ ಎಂದು ಹೇಳಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ ಹೆಚ್ಚಬೇಕು ಆ ಮೂಲಕ ಇಲ್ಲಿನ ಜನತೆಗೆ ಆರ್ಥಿಕವಾಗಿ ಲಾಭವಿದೆ. ಆದರೆ ಕೊಡಗು ಇಡೀ ರಾಜ್ಯದಲ್ಲಿಯೇ ವಿಶೇಷವಾದ ಸುಂದರ ಜಿಲ್ಲೆ. ಇಲ್ಲಿ ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ನಿರ್ವಹಣೆಗೆ ಎಲ್ಲರೂ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು. - ಟಿ.ಎಲ್.ಎಸ್.