ಚೆಯ್ಯಂಡಾಣೆ, ಜ. 28: ಕೇರಳದ ಪಯ್ಯವೂರು ಬೈತೂರು ದೇವರ ಕೋಮರತಚ್ಚ ಅವರು ತಾ. 30 ರಂದು ಮುಂಡ್ಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಗಳ ಐನ್ಮನೆಗಳಿಗೆ ಭೇಟಿ ನೀಡಿ ನಂತರ ಕಡಿಯಂತ ಮೂವೇರ ನಾಡಿಗೆ ದೇವರ ಹಬ್ಬದ ಅರಿವಿಕೆಯನ್ನು ಕೊಡಲು ಆಗಮಿಸಲಿದ್ದಾರೆ.
ಫೆ. 10 ರಂದು ಮುಂಡ್ಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ಅಕ್ಕಿಯನ್ನು ಎತ್ತು ಹೋರಾಟದೊಂದಿಗೆ ಪಯ್ಯವೂರು ಬೈತೂರು ದೇವರಿಗೆ ಸಮರ್ಪಿಸಲಿದ್ದಾರೆ. ನಂತರ ಫೆ. 21 ರಂದು 8ನೇ ಊಟು ಹಬ್ಬ, ಫೆ. 22 ರಂದು 9ನೇ ಊಟು ಹಬ್ಬವು, 23 ರಂದು 10ನೇ ಊಟು ಹಬ್ಬ ನಡೆಯಲಿದೆ ಎಂದು ಮುಂಡ್ಯೋಳಂಡ ಹಾಗೂ ಬೊವ್ವೇರಿಯಂಡ ಕುಟುಂಬಸ್ಥರು ತಿಳಿಸಿದ್ದಾರೆ.