ಮಡಿಕೇರಿ, ಜ. 28: ದೇಶದ ಪ್ರಪ್ರಥಮ ಮಹಾ ದಂಡನಾಯಕ, ಅಪ್ರತಿಮ ಸೇನಾನಿ, ಫೀಲ್ಡ್ ಮಾರ್ಷಲ್ ಕೊಡಂದೇರ ಎಂ. ಕಾರ್ಯಪ್ಪ ಅವರ 120ನೇ ಹುಟ್ಟು ಹಬ್ಬವನ್ನು ಗೌರವಾದರಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾ ಯಿತು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಫೀ.ಮಾ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂನ ಸಹಕಾರದೊಂದಿಗೆ ಕಾರ್ಯಕ್ರಮ ಏರ್ಪಡಿಸಿ ಆಚರಿಸಲಾಯಿತು. ಪುಷ್ಪನಮನ ಬೆಳಿಗ್ಗೆ ಫೀ.ಮಾ. ಕಾರ್ಯಪ್ಪ ವೃತ್ತದ ಬಳಿ ಇರುವ ಕಾರ್ಯಪ್ಪ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವಿಸಲಾಯಿತು. ಫೀ.ಮಾ. ಕಾರ್ಯಪ್ಪ ಅವರ ಪುತ್ರ ನಿವೃತ್ತ ಏರ್‍ಮಾರ್ಷಲ್ ಕೆ.ಸಿ. ಕಾರ್ಯಪ್ಪ, ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚುರಂಜನ್, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಮಾಜಿ ಸಚಿವ ಯಂ.ಸಿ. ನಾಣಯ್ಯ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಫೋರಂನ ಅಧ್ಯಕ್ಷ ಕ. ಕಂಡ್ರತಂಡ ಸುಬ್ಬಯ್ಯ, ಸಂಚಾಲಕ ಮೇ. ಬಿದ್ದಂಡ ನಂಜಪ್ಪ, ಕಾರ್ಯದರ್ಶಿ ಡಾ. ಉಳ್ಳಿಯಡ ಪೂವಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೆಮ್ಮಯ್ಯ, ತಲಕಾವೇರಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕೊಡವ ಸಮಾಜದ ಅಧ್ಯಕ್ಷ ಕೊಂಗಾಂಡ ದೇವಯ್ಯ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್, ತಹಶೀಲ್ದಾರ್ ಕುಸುಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಕೆ.ಟಿ. ದರ್ಶನ್ ಸೇರಿದಂತೆ ಇತರರು ಪೊಲೀಸ್ ಬ್ಯಾಂಡ್ ಗೌರವದೊಂದಿಗೆ ಪುಷ್ಪ ನಮನ ಸಲ್ಲಿಸಿದರು.

ಶಿಸ್ತಿನ ಮೆರವಣಿಗೆ

ನಂತರ ಕಾರ್ಯಪ್ಪ ಅವರ ಭಾವಚಿತ್ರವಿದ್ದ ತೆರೆದ ವಾಹನ ದೊಂದಿಗೆ ದುಡಿಕೊಟ್ಟ್‍ಪಾಟ್, ಸಾಂಪ್ರದಾಯಿಕ ವಾಲಗ, ಕಲಾತಂಡ ಗಳು,

(ಮೊದಲ ಪುಟದಿಂದ) ಎನ್‍ಸಿಸಿ ಕೆಡೆಟ್‍ಗಳು, ಜ. ತಿಮ್ಮಯ್ಯ, ಕೊಡಗು ವಿದ್ಯಾಲಯ, ಸೈನಿಕ ಶಾಲೆಯ ಮಕ್ಕಳು, ನಿವೃತ್ತ ಸೇನಾಧಿಕಾರಿಗಳು, ಸಾರ್ವಜನಿಕರ ಸಹಿತ ಮೆರವಣಿಗೆ ತೆರಳಲಾಯಿತು. ಮುಖ್ಯ ರಸ್ತೆಗಾಗಿ ಸಾಗಿದ ಶಿಸ್ತಿನ ಮೆರವಣಿಗೆ ಕೋಟೆ ಆವರಣದಲ್ಲಿ ಸಂಪನ್ನಗೊಂಡಿತು.

ಇತಿಹಾಸ ತಿಳಿಸಬೇಕು

ಆ ಬಳಿಕ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಫೀ.ಮಾ. ಕಾರ್ಯಪ್ಪ ಜಿಲ್ಲೆಯಲ್ಲಿ ಹುಟ್ಟಿ ವಿಶ್ವಮಟ್ಟದಲ್ಲಿ ಹೆಸರುವಾಸಿ ಯಾದವರು. ಅವರಿಂದು ನಮ್ಮ ಕಣ್ಣ ಮುಂದಿಲ್ಲ. ಆದರೆ, ಅವರು ಮಾಡಿರುವ ಉತ್ತಮ ಕೆಲಸ- ಕಾರ್ಯಗಳು ನಮ್ಮ ಮುಂದಿದೆ. ಕಾರ್ಯಪ್ಪ ಅವರೊಂದು ಇತಿಹಾಸ; ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯಿದೆಯೆಂದು ಹೇಳಿದರು. ವೀರಪರಂಪರೆ ಇರುವ ನಾಡಿನಲ್ಲಿ ಹುಟ್ಟಿರುವ ನಮ್ಮೆಲ್ಲರಲ್ಲೂ ದೇಶಭಕ್ತಿ ಇರಬೇಕು. ದೇಶ ಮುಖ್ಯ. ದೇಶಕ್ಕಾಗಿ ಏನಾದರೂ ಮಾಡಬೇಕು. ಅಂಕು- ಡೊಂಕು ಮಾರ್ಗದಲ್ಲಿ ಹೋಗ ಬಾರದು ಎಂದು ಹೇಳಿದರಲ್ಲದೆ, ವಿದ್ಯಾರ್ಥಿಗಳು ಅವಶ್ಯಕತೆ ಇದ್ದಾಗ ಮಾತ್ರ ಮೊಬೈಲ್ ಬಳಸಬೇಕು, ಅದರ ದಾಸರಾಗ ಬಾರದೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಸೈನಿಕರು ಹಾಗೂ ರೈತರು ನಮಗೆ ನಿಜವಾದ ಹೀರೋಗಳು. ನಾವುಗಳು ಸುಖವಾಗಿ ಬದುಕು ಸಾಗಿಸಲು ಗಡಿಯಲ್ಲಿ ನಮ್ಮನ್ನು ಕಾಯುತ್ತಿರುವ ಸೈನಿಕರೇ ಕಾರಣವೆಂದು ಹೇಳಿದರು. ದೇಶದ ಎಲ್ಲಾ ಕಡೆಗಳಲ್ಲೂ ಫೀ.ಮಾ. ಕಾರ್ಯಪ್ಪ ಅವರ ಹೆಸರಲ್ಲಿ ವೃತ್ತಗಳು, ರಸ್ತೆಗಳಿರುವದು ನಮಗೆ ಹೆಮ್ಮೆಯ ವಿಷಯ. ವಿಶಿಷ್ಟ ಸ್ಥಾನಮಾನ ಹೊಂದಿ ರುವ ಜಿಲ್ಲೆಯಲ್ಲಿ ಇದೀಗ ಸೇನೆಗೆ, ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಳ್ಳುವವರ ಸಂಖ್ಯೆಯಲ್ಲಿ ಹಿನ್ನಡೆ ಕಂಡುಬರುತ್ತಿದೆ. ಈ ಹಿಂದಿನ ಸೇನಾ ಪರಂಪರೆ ಮರುಕಳಿಸಬೇಕಿದೆ. ಹಿರಿಯ ಸೇನಾಧಿಕಾರಿಗಳು ಈ ನಿಟ್ಟಿನಲ್ಲಿ ತರಬೇತಿ ನೀಡುವ ಮೂಲಕ ಸೇನೆಗೆ ಸೇರ್ಪಡೆಗೊಳ್ಳಲು ಸಾಮಥ್ರ್ಯ ಹೊಂದಲು ಪ್ರೇರೇಪಿಸಬೇಕಿದೆ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಫೀ.ಮಾ. ಕಾರ್ಯಪ್ಪ - ಜ. ತಿಮ್ಮಯ್ಯ ಫೋರಂನ ಅಧ್ಯಕ್ಷ ಕೆ. ಕಂಡ್ರತಂಡ ಸುಬ್ಬಯ್ಯ ಅವರು ಕಾರ್ಯಪ್ಪ ಜಯಂತಿಯನ್ನು ಕೆಲವು ವರ್ಷಗಳಿಂದ ಸರಕಾರದ ವತಿಯಿಂದ ನಡೆಸಿಕೊಂಡು ಬರುತ್ತಿರುವದು ಸಂತೋಷದ ವಿಚಾರ. ಆದರೆ ಈ ಬಾರಿ ಸರಕಾರದ ಬಜೆಟ್‍ನಲ್ಲಿರುವ ಅನುದಾನ ತರುವಲ್ಲಿ ಜಿಲ್ಲಾಡಳಿತ ವಿಫಲವಾಗಿರುವದು ಬೇಸರ ಮೂಡಿಸಿದೆ. ಇನ್ನು ಮುಂದಕ್ಕೆ ಈ ರೀತಿಯ ಲೋಪ ದೋಷಗಳಾU Àದಿರಲೆಂದು ಆಶಿಸಿದರು. ಯುವ ಪೀಳಿಗೆ ಕಾರ್ಯಪ್ಪ ಅವರ ಸಮಯ ಪ್ರಜ್ಞೆ, ಶಿಸ್ತನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಫೋರಂ ಸಂಚಾಲಕ ಮೇ. ಬಿದ್ದಂಡ ನಂದಾ ನಂಜಪ್ಪ ಕಾರ್ಯಪ್ಪ ಅವರ ಕುರಿತಾಗಿ ಮಾತನಾಡಿ, ಭಾರತ ಸೇನೆ ಪಾಕಿಸ್ತಾನದಂತೆ ರಕ್ಕಸ ಸೇನೆಯಾಗದೆ ಶಿಸ್ತಿನ ಸೇನೆಯಾಗಿ ಉಳಿದುಕೊಂಡಿರುವದಕ್ಕೆ ಕಾರ್ಯಪ್ಪ ಅವರೇ ಕಾರಣರು; ಅವರೊಂದು ಈ ದೇಶದ ಅನಘ್ರ್ಯ ರತ್ನವೆಂದು ಬಣ್ಣಿಸಿದರು.

ಇದೇ ಸಂದರ್ಭ ಕಾರ್ಯಪ್ಪ ಅವರ ಜೀವನ ಚರಿತ್ರೆ ಕುರಿತಾಗಿನ ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಕೆ.ಸಿ. ಕಾರ್ಯಪ್ಪ ಉದ್ಘಾಟಿಸಿದರು. ಕಾರ್ಯಪ್ಪ ಅವರ ಕುರಿತಾಗಿನ ಕಿರುಹೊತ್ತಿಗೆಯನ್ನು ಪ್ರಭಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಫೋರಂನ ಕಾರ್ಯದರ್ಶಿ ಡಾ. ಉಳ್ಳಿಯಡ ಪೂವಯ್ಯ, ಎನ್‍ಸಿಸಿ ಕಮಾಂಡೆಂಟ್ ನಾಯಕ್, ಫೀ.ಮಾ. ಕಾರ್ಯಪ್ಪ ಕಾಲೇಜು ಎನ್‍ಸಿಸಿ ಅಧಿಕಾರಿ ಮೇಜರ್ ರಾಘವ, ಫೀ.ಮಾ. ಕಾರ್ಯಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಮುನೀರ್ ಮಾಚಾರ್, ಜಿ.ಪಂ. ಉಪಕಾರ್ಯದರ್ಶಿ ಗುಡೂರು ಭೀಮಸೇನ, ಸೈನಿಕ ಶಾಲೆ ಉಪನ್ಯಾಸಕ ಮಂಜಪ್ಪ ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉಪನಿರ್ದೇಶಕ ಕೆ.ಟಿ. ದರ್ಶನ್ ಸ್ವಾಗತಿಸಿದರೆ, ಪೊನ್ನಂಪೇಟೆಯ ಗಿರೀಶ್ ಮತ್ತು ತಂಡದವರು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಶಿಕ್ಷಕಿ ಚೋಕೀರ ಅನಿತಾ ದೇವಯ್ಯ ನಿರೂಪಿಸಿದರೆ, ಮಣಜೂರು ಮಂಜುನಾಥ್ ವಂದಿಸಿದರು.