ಗೋಣಿಕೊಪ್ಪಲು, ಜ. 28: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ 2019-2022ನೇ ಸಾಲಿನ ನೂತನ ಅಧ್ಯಕ್ಷರಾಗಿ ಎರಡನೇ ಭಾರಿಗೆ ಕಾಡ್ಯಮಾಡ ಮನು ಸೋಮಯ್ಯ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಜಿಲ್ಲಾ ಉಪಾಧ್ಯಕ್ಷರಾಗಿ ಸೋಮವಾರಪೇಟೆಯ ಆರ್.ಶಂಕರಪ್ಪ, ಕಾರ್ಯದರ್ಶಿಯಾಗಿ ಶ್ರೀಮಂಗಲದ ಅಜ್ಜಮಾಡ ಟಿ. ಚಂಗಪ್ಪ, ಕೋಶಾಧಿಕಾರಿಯಾಗಿ ಮಾಲ್ದಾರೆಯ ಇಟ್ಟಿರ ಸಭಿತ ಭೀಮಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಸಂಚಾಲಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚೆಟ್ರುಮಾಡ ಸುಜಯ್ ಬೋಮಯ್ಯ ಹಾಗೂ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ ಆಯ್ಕೆಯಾದರು. ಶ್ರೀಮಂಗಲ ಹೋಬಳಿಯ ಸಂಚಾಲಕ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಚಂಗುಲಂಡ ರಾಜಪ್ಪ ವಿಜಯಿ ಯಾದರು. ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಗುಡಿಯಂಡ ಮುತ್ತು ಪೂವಯ್ಯ, ಜಿಲ್ಲಾ ಸಂಚಾಲಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಚಿಮ್ಮಂಗಡ ಗಣೇಶ್ ಗಣಪತಿ, ಹಾಗೂ ಶ್ರೀಮಂಗಲ ಹೋಬಳಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಜ್ಜಮಾಡ ಐಯ್ಯಣ್ಣ ಸೋಲನ್ನು ಅನುಭವಿಸಿದರು.
ಉಳಿದಂತೆ ವೀರಾಜಪೇಟೆ ತಾಲೂಕು ಕಾರ್ಯದರ್ಶಿಯಾಗಿ ಪೆಮ್ಮಂಡ ಪೂವಯ್ಯ,ಸಂಚಾಲಕರಾಗಿ ಬಾಚಮಾಡ ಭವಿಕುಮಾರ್, ಹುದಿಕೇರಿ ಹೋಬಳಿ ಸಂಚಾಲಕ ರಾಗಿ ಚಂಗುಲಂಡ ಸೂರಜ್, ಪೊನ್ನಂಪೇಟೆಯ ಹೋಬಳಿ ಸಂಚಾಲಕರಾಗಿ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಸಂಚಾಲಕರಾಗಿ ಮೇಚಂಡ ಮಾಚಯ್ಯ, ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ ಮುಂಜಾನೆ ಯಿಂದ ಮಧ್ಯಾಹ್ನದವರೆಗೂ ಬಿರುಸಿನ ಮತದಾನ ನಡೆಯಿತು. ಜಿಲ್ಲೆಯ ವಿವಿಧ ಭಾಗದಿಂದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.ಇದೇ ಮೊದಲ ಬಾರಿಗೆ ಕೊಡಗು ಜಿಲ್ಲಾ ರೈತ ಸಂಘದ ಪದಾಧಿಕಾರಿಗಳ ಸ್ಥಾನಕ್ಕೆ ಚುನಾವಣೆ ನಡೆದಿರುವದು ವಿಶೇಷವಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘದ ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ರಾಜ್ಯ ಘಟಕದ ಕಾರ್ಯದರ್ಶಿಯಾದ ರವಿಕಿರಣ್ ಪೂಣಚ್ಚ ಚುನಾವಣಾಧಿಕಾರಿಯಾಗಿ ಹಿರಿಯ ವಕೀಲ ರೈತ ಸಂಘದ ಮುಖಂಡರಾದ ಕೆ. ಬಿ. ಹೇಮಚಂದ್ರ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಖಾಯಂ ಆಹ್ವಾನಿತ ಲೋಕೇಶ್ ರಾಜೇ ಅರಸ್ ಮುಂತಾದ ರಾಜ್ಯ ಪದಾಧಿಕಾರಿಗಳು ಹಾಜರಿದ್ದರು.