ಮಡಿಕೇರಿ, ಜ. 23: ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನಲ್ಲಿ ತಾ. 28 ಮತ್ತು 29 ರಂದು ಚೆರಿಯಪಂಡ ಕುಶಾಲಪ್ಪ ಜ್ಞಾಪಕಾರ್ಥವಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಹಾಕಿ ಪಂದ್ಯಾವಳಿ ನಡೆಯಲಿದೆ.

ಪಂದ್ಯಾವಳಿಯ ಉದ್ಘಾಟನೆ ತಾ. 28 ರಂದು ಬೆಳಿಗ್ಗೆ 10.30ಕ್ಕೆ ಕಾಲೇಜಿನ ಬಾಚೆಟ್ಟಿರ ಲಾಲೂ ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಅಮ್ಮತ್ತಿಯ ಮದ್ರಿರ ಗಣೇಶ್ ಗಣಪತಿ ,ಪೊನ್ನಂಪೇಟೆಯ ಕೊಡಗು ಎಜ್ಯುಕೇಶನ್ ಸೊಸೈಟಿಯ ಗೌರವ ಕಾರ್ಯದರ್ಶಿ ಚೆರಿಯಪಂಡ ರಾಕೇಶ್ ಪೂವಯ್ಯ, ಬೆಂಗಳೂರಿನ ಅರೆಯಡ ಪವೀನ್ ಪೊನ್ನಣ್ಣ, ಮೂರ್ನಾಡಿನ ಕೊಡುಗೈ ದಾನಿಗಳಾದ ಬಾಚೆಟ್ಟಿರ ಕಮಲು ಮುದ್ದಯ್ಯ ಹಾಗೂ ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಉಪಸ್ಥಿತರಿರುತ್ತಾರೆ. ವಿದ್ಯಾಸಂಸ್ಥೆಯ ಹಾಕಿ ತರಬೇತುದಾರ ಅವರೆಮಾದಂಡ ಜಿ. ಕುಶಾಲಪ್ಪ ಅವರನ್ನು ಗೌರವಿಸಲಾಗುತ್ತದೆ.

ಸಮಾರೋಪ ಸಮಾರಂಭವು ತಾ. 29 ರಂದು ನಡೆಯಲಿದೆ. ಅಂತಿಮ ಪಂದ್ಯಾವಳಿಯ ನಂತರ ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೂರ್ನಾಡಿನ ಕಾಫಿ ಉದ್ಯಮಿಗಳಾದ ಪಾಂಡಂಡ ಯಧು ಮೇದಪ್ಪ, ದಾನಿಗಳಾದ ಬಾಚೆಟ್ಟಿರ ಕಮಲು ಮುದ್ದಯ್ಯ, ಜನರಲ್ ಕೆ.ಎಸ್. ತಿಮ್ಮಯ್ಯ ಸ್ಪೋಟ್ರ್ಸ್ ಅಕಾಡೆಮಿಯ ನಿರ್ದೇಶಕರು ಹಾಗೂ ಮೂರ್ನಾಡು ವಿದ್ಯಾಸಂಸ್ಥೆಯ ನಿರ್ದೇಶಕರಾದ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಮತ್ತಿತರರು ಪಾಲ್ಗೊಳ್ಳುವರು.