ಶನಿವಾರಸಂತೆ, ಜ. 23: ಶ್ರೀ ಬೀರಲಿಂಗೇಶ್ವರ, ಪ್ರಬಲಭೈರವಿ ಪರಿವಾರ ದೇವರುಗಳ ಸೇವಾ ಸಮಿತಿ ವತಿಯಿಂದ ಜೀರ್ಣೋದ್ಧಾರಗೊಂಡ ಶ್ರೀ ಬೀರಲಿಂಗೇಶ್ವರ ಗ್ರಾಮ ದೇವತೆಯ 48ನೇ ದಿನದ ಮಂಡಲ ಪೂಜಾ ಕಾರ್ಯಕ್ರಮವನ್ನು ತಾ. 24 ಮತ್ತು 25ರಂದು ಏರ್ಪಡಿಸಲಾಗಿದೆ.
ತಾ. 24ರ ರಾತ್ರಿ 7 ಗಂಟೆಯಿಂದ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಪ್ರೋಕ್ಷಣೆ, ವಾಸ್ತುಹೋಮ, ವಾಸ್ತುಬಲಿ, ದಿಗ್ಬಂಧನ, ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ತಾ. 25ರಂದು ಬೆಳಿಗ್ಗೆ 7 ಗಂಟೆಗೆ ಮಹಿಳಾ ಭಕ್ತಾದಿಗಳಿಂದ ಸಹಕಾರ ಬ್ಯಾಂಕಿನಿಂದ ಗುಡಿಯವರೆಗೆ ಗಂಗಾಪೂಜೆ ಹಾಗೂ ಕಳಸ ಮೆರವಣಿಗೆ, 8ರಿಂದ ಪರಿವಾರ
ದೇವರುಗಳ ಪೂಜಾ ಕಾರ್ಯಕ್ರಮ, 9ರಿಂದ ಗೋಪೂಜೆ, ನವಗ್ರಹ ಪೂಜೆ, ಪ್ರಬಲ ಭೈರವಿಗೆ ದುರ್ಗಾ ಹೋಮ, ಬೀರಲಿಂಗೇಶ್ವರ ಹೋಮ, ಮೃತ್ಯುಂಜಯ ಹೋಮ, ಗಣಪತಿ ಹೋಮ, ಮೂಲ ತಲಕಾವೇರಿ ಯಿಂದ ತಂದ ಗಂಗೆಯಿಂದ ಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.