ಗೋಣಿಕೊಪ್ಪಲು, ಜ. 10: ಕಾವೇರಿ ಪದವಿ ಕಾಲೇಜಿನ ಎನ್.ಸಿ.ಸಿ.ಘಟಕದ ವತಿಯಿಂದ ಇರ್ಪು ಬ್ರಹ್ಮಗಿರಿ ಬೆಟ್ಟದಲ್ಲಿ “ಔಷಧಿ ಸಸ್ಯಗಳ ಅಧ್ಯಯನ ಮತ್ತು ಚಾರಣ” ಹಮ್ಮಿಕೊಳ್ಳಲಾಗಿತ್ತು. ಈ ಚಾರಣದ ನೇತೃತ್ವವನ್ನು ಎನ್.ಸಿ.ಸಿ ಅಧಿಕಾರಿಯಾದ ಅಕ್ರಮ್ ವಹಿಸಿದ್ದರು. ಈ ಸಂದರ್ಭ ವಲಯ ಅರಣ್ಯಾಧಿಕಾರಿಗಳು, ಸಹಾಯಕ ಅರಣ್ಯ ಸಿಬ್ಬಂದಿಯಾದ ಗಜೇಂದ್ರ, ಶರತ್, ಎನ್.ಸಿ.ಸಿ. ಘಟಕದ ನಾಯಕರಾದ ಅಭಿಷೇಕ್, ಕರುಂಬಯ್ಯ ಮತ್ತು ನೂರಾರು ಕೆಡೆಟ್‍ಗಳು ಇದ್ದರು.