ಕೂಡಿಗೆ, ಜ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಗುಮ್ಮನಕೊಲ್ಲಿ ಒಕ್ಕೂಟದ ವ್ಶಾಪ್ತಿಯ ಜಾವಿದ್ ಅವರು ಅಪಘಾತದಿಂದಾದ ಅನಾರೋಗ್ಯದಿಂದ ಅಂಗಾಂಗಗಳ ಸ್ವಾದೀನತೆ ಕಳೆದುಕೊಂಡು ಹಾಸಿಗೆ ಹಿಡಿದಿದ್ದು ಕುಟುಂಬದ ಆದಾರ ವಾಗಿದ್ದ ಜಾವಿದ್ ರವರಿಗೆ ಶ್ರೀ ಕ್ಷೇತ್ರದಿಂದ ಮಂಜೂರು ಮಾಡಿರುವ ಮಾಸಿಕ ರೂ. 750 ಮಾಶಾಸನವನ್ನು ತಾಲೂಕಿನ ನಗದು ಸಂಗ್ರಹಕ ದರ್ಶನ್ ಜಾವಿದ್ ತಾಯಿಗೆ ವಿತರಿಸಿದರು.

ಗುಮ್ಮನಕೊಲ್ಲಿ ಬಿ ಒಕ್ಕೂಟದ ಅಧ್ಶಕ್ಷೆ ಶರ್ಮಿಳಾ ಉಪಸ್ಥಿತರಿದ್ದರು. ಕೂಡಿಗೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಮಾಶಾಸನ ಮಂಜೂರಾತಿಗಾಗಿ ಸಹಕರಿಸಿದರು.