ಶನಿವಾರಸಂತೆ, ಜ. 9: ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಮೂದ್ರವಳ್ಳಿ ಗ್ರಾಮದಲ್ಲಿ ತಾ.ಪಂ. ಸದಸ್ಯ ಹೆಚ್.ಬಿ. ಕುಶಾಲಪ್ಪ ಅವರು ತಮ್ಮ ಅನುದಾನದಲ್ಲಿ ರೂ. 1.18 ಲಕ್ಷ ವೆಚ್ಚದ ಕಾಂಕ್ರಿಟ್ ರಸ್ತೆ ಹಾಗೂ ರೂ. 36 ಸಾವಿರ ವೆಚ್ಚದಲ್ಲಿ ಅಂಗನವಾಡಿ ದುರಸ್ತಿಗೆ ಭೂಮಿ ಪೂಜೆ ನೆರವೇರಿಸಿದರು.

ತನಗೆ 3 ಪಂಚಾಯಿತಿ ಸೇರುತ್ತಿದ್ದು, ಅನುದಾನ ಕಡಿಮೆ ಬರುತ್ತಿದೆ. ಅದರಲ್ಲೇ ಊರು ಅಭಿವೃದ್ಧಿಯಾಗಬೇಕು, ಇಲ್ಲಿಗೆ ಎಂಪಿ, ಶಾಸಕರು, ಎಂಎಲ್‍ಸಿಯವರ ಅನುದಾನವಿಲ್ಲ. ಪಂಚಾಯಿತಿ ಸದಸ್ಯರು ನಾಯಕರುಗಳನ್ನು ಒತ್ತಾಯ ಮಾಡಬೇಕು ನಾಯಕರುಗಳು ಭೇಟಿ ನೀಡದೆ ಗ್ರಾಮದ ಅಭಿವೃದ್ಧಿ ಕುಂಠಿತವಾಗಿದೆ. ಸಮಾರಂಭದಲ್ಲಿ ಗ್ರಾ.ಪಂ. ಸದಸ್ಯ ಬೆಳ್ಳಿಯಪ್ಪ, ಮುತ್ತೆಗೌಡ, ಸುಬ್ರಮಣ್ಯ, ದೊಡ್ಡೆಗೌಡ ರಾಜಪ್ಪ, ದೇವಪ್ಪ, ರಾಮಕೃಷ್ಣ, ಹೂವಯ್ಯ, ಮಂಜಮ್ಮ, ದಿವ್ಯ, ನಾಗರಾಜ್ ವೆಂಕಟೇಶ್, ಗಣೇಶ್, ದಿಲೀಪ್, ಗುತ್ತಿಗೆದಾರ ಹಮೀದ್ ಉಪಸ್ಥಿತರಿದ್ದು, ವಿನೋದ್ ಸ್ವಾಗತಿಸಿ, ಬೆಳ್ಳಿಯಪ್ಪ ವಂದಿಸಿದರು.