ನಾಪೆÉÇೀಕ್ಲು, ಜ. 9: ನಾಪೆÇೀಕ್ಲು ವಾಹನ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಅದ್ಧೂರಿ ಗಣರಾಜ್ಯೋತ್ಸವ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಮೂವೆರ ವಿನೂ ಪೂಣಚ್ಚ ಹೇಳಿದರು.

ಈ ಪ್ರಯುಕ್ತ ನಾಪೆÇೀಕ್ಲು ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದರ ಅಂಗವಾಗಿ ಹಳೇ ತಾಲೂಕು ರಸ್ತೆಯ ಪೆಟ್ರೋಲ್ ಬಂಕ್‍ನಿಂದ ಮಾರುಕಟ್ಟೆಯವರೆಗೆ ಆಟೋ ರಿಕ್ಷಾ ಮತ್ತು ವಾಹನಗಳ ಮೆರವಣಿಗೆಯನ್ನು ನಡೆಸಲು ಉದ್ಧೇಶಿಸಿಲಾಗಿದೆ ಎಂದು ತಿಳಿಸಿದ ಅವರು ಸಂಘದ ಸದಸ್ಯರು ತಮ್ಮ ಸದಸ್ಯತ್ವವನ್ನು ನವೀಕರಣ ಮಾಡಿಸಿಕೊಳ್ಳುವಂತೆ ಕೋರಿದರು.

ಸಭೆಯಲ್ಲಿ ಸಂಘದ ಕಾರ್ಯಾಧ್ಯಕ್ಷ ಎಂ.ಇ. ರಜಾಕ್, ಕಾರ್ಯದರ್ಶಿ ಕೆ.ಕೆ. ಲೋಕೇಶ್, ಸಹಕಾರ್ಯದರ್ಶಿ ಮಹೇಶ್, ಸದಸ್ಯರುಗಳಾದ ಟಿ.ವಿ. ಶಶಿ, ಎಂ.ಸಿ. ನಾಗರಾಜ್, ಕುಂಡ್ಯೋಳಂಡ ಸಂಪತ್ ದೇವಯ್ಯ, ಹರೀಶ್, ಶ್ರೀಜೇಶ್, ಹನಿ, ಇದ್ದರು.