ಮಡಿಕೇರಿ, ಜ. 1: ಶ್ರೀ ಕಾವೇರಮ್ಮ ಕೊಡವ- ಅಮ್ಮ ಕೊಡವ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ತಾ. 15 ರಂದು ಭಾಗಮಂಡಲದಲ್ಲಿ ಶ್ರೀ ಗಣಪತಿ ಹೋಮ, ಶ್ರೀ ಚಂಡಿಕಾ ಹೋಮ, ಸತ್ಯನಾರಾಯಣ ಪೂಜೆ, ಶತರುದ್ರ ಪಠಣ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಂದು ಬೆಳಿಗ್ಗೆ 7 ಗಂಟೆಯಿಂದ ಭಾಗಮಂಡಲದ ಕಾವೇರಿ ತಟದಲ್ಲಿ ದೈವಿಕ ಕೈಂಕರ್ಯ ಪ್ರತಿವರ್ಷದಂತೆ ಆರಂಭಗೊಳ್ಳಲಿದೆ. ಲೋಕಕಲ್ಯಾಣ ಹಾಗೂ ಶಾಪ ವಿಮೋಚನೆಗಾಗಿ ಸಮಿತಿ ಈ ಕಾರ್ಯಕ್ರಮ ಆಯೋಜಿಸಿರುವದಾಗಿ ತಿಳಿಸಲಾಗಿದೆ.