ಗೋಣಿಕೊಪ್ಪ ವರದಿ, ಡಿ. 30 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಎ. ಡಿವಿಜನ್ ಹಾಕಿಲೀಗ್ ಕಪ್ನ್ನು ನಾಪೋಕ್ಲು ಶಿವಾಜಿ ತಂಡವು ಗೆದ್ದುಕೊಳ್ಳುವ ಮೂಲಕ ಕೊಡಗು ಹಾಕಿ ಲೀಗ್ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಫೈನಲ್ನಲ್ಲಿ ಸೋಲನುಭವಿಸಿದ ಬೇಗೂರು ಈಶ್ವರ ಯೂತ್ ಕ್ಲಬ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಟೂರ್ನಿಯಲ್ಲಿ ಸೋಲಿನ ರುಚಿ ಕಂಡಿಲ್ಲದ ಬೇಗೂರು ಕೊನೆಯಲ್ಲಿ ಸೋಲಿಗೆ ಶರಣಾಗಿ ನಿರಾಸೆ ಮೂಡಿಸಿತು. ಬಿ. ಡಿವಿಜನ್ ಮೂಲಕ ಎ. ಡಿವಿಜನ್ ಆಡಿದ ನಾಪೋಕ್ಲು ಶಿವಾಜಿ ತಂಡ ಬಿ. ಡಿವಿಜನ್ನ ತಂಡವೊಂದು ಲೀಗ್ ಚಾಂಪಿಯನ್ ತಂಡವಾಗಿ ಸಾಧನೆ ಮಾಡಿದ ತಂಡವಾಗಿ ದಾಖಲೆ ನಿರ್ಮಿಸಿತು. ಕಳೆದ ಬಾರಿಯ ಚಾಂಪಿಯನ್ ಬೇಗೂರು ತಂಡ ಚಾಂಪಿಯನ್ ಪಟ್ಟ ಕಳೆದುಕೊಂಡಿತು.
ಫೈನಲ್ ಪಂದ್ಯದಲ್ಲಿ ಶಿವಾಜಿ ತಂಡವು ಶೂಟೌಟ್ ಮೂಲಕ 4-2 ಗೋಲುಗಳ ಗೆಲವು ದಾಖಲಿಸಿತು. ಶಿವಾಜಿ ಪರ 37 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನ್ನು ಶುಭಂ ಚಿಟ್ಯಪ್ಪ ಗೋಲಾಗಿ ಪರಿವರ್ತಿಸಿ ಮೈದಾನದಲ್ಲಿ ಸಂಚಲನ ಮೂಡಿಸಿದರು. ಇದರ ಬೆನ್ನೆಲ್ಲೆ ಬೇಗೂರು ಪರ 51 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿಯನ್ನು ಪ್ರಥ್ವಿ ಅಯ್ಯಮ್ಮ ಗೋಲಾಗಿ ಪರಿವರ್ತಿಸಿ ಸಮಬಲ ಸಾಧಿಸಲು ಕಾರಣಕರ್ತರಾದರು. ಶೂಟೌಟ್ನಲ್ಲಿ ಶಿವಾಜಿ ಪರ ಶುಭಂ ಚಿಟ್ಯಪ್ಪ, ಜೋಯಪ್ಪ, ಪೆಮ್ಮಯ್ಯ, ಬೇಗೂರು ಪರ ಮಂಜುನಾಥ್ ಗೋಲು ಹೊಡೆದರು. ಶೂಟೌಟ್ನಲ್ಲಿ ಕಳಪೆ ನಿರ್ವಹಣೆ ತೋರಿದ ಬೇಗೂರು ಕೇವಲ 1 ಗೋಲು ಹೊಡೆದು ನಿರಾಸೆ ಮೂಡಿಸಿತು. ಶೂಟೌಟ್ನಲ್ಲಿ ಸತತ 3 ಗೋಲು ಹೊಡೆದು ಶಿವಾಜಿ ಗೆಲವಿನ ನಗೆ ಬೀರಿತು.
ಪ್ರಥಮಾರ್ಧದಲ್ಲಿ ಬೇಗೂರು ತಂಡಕ್ಕೆ ದೊರೆತ 4 ಪೆನಾಲ್ಟಿ ಕಾರ್ನರ್ನ್ನು ಕೂಡ ಗೋಲಾಗಿ ಪರಿವರ್ತಿಸಲು ವಿಫಲವಾಯಿತು. ಇದು ಸೋಲಿಗೂ ಕಾರಣವಾಯಿತು. ಮುನ್ನಡೆ ಆಟಗಾರರ ಕಳಪೆ ನಿರ್ವಹಣೆ ತಂಡಕ್ಕೆ ಹೊಡೆತ ಬಿದ್ದಿತು. ಶಿವಾಜಿ ದೊರೆತ 2 ಪೆನಾಲ್ಟಿ ಕಾರ್ನರ್ನಲ್ಲಿ 1 ಗೋಲು ಹೊಡೆದು ಅವಕಾಶ ದಕ್ಕಿಸಿಕೊಂಡರು. ಒಂದೇ ಒಂದು ಸೋಲು ಕಾಣದ ಬೇಗೂರು ಸೋಲಿನ ರುಚಿ ಅನುಭವಿಸಿ ರನ್ನರ್ ಅಪ್ಗಷ್ಟೆ ತೃಪ್ತಿಪಟ್ಟುಕೊಂಡಿತು.
ಹೆಚ್ಚು ಗೋಲು ಹೊಡೆದ ಗೌತಂ
ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ಆಟಗಾರ ಗೌತಂ 9 ಗೋಲು ಹೊಡೆದು ಟೂರ್ನಿಯಲ್ಲಿ ಹೆಚ್ಚು ಗೋಲು ಹೊಡೆದ ಆಟಗಾರನಾಗಿ ಹೊರಹೊಮ್ಮಿದರು. ಉಳಿದಂತೆ ಉತ್ತಮ ಅಟಗಾರರುಗಳಾಗಿ ಟಾಟಾ ಕಾಫಿ ತಂಡದ ಕಾರ್ಯಪ್ಪ, ನಾಪೋಕ್ಲು ಶಿವಾಜಿ ತಂಡದ ಶುಭಂ ಚಿಟ್ಯಪ್ಪ, ಬೇಗೂರು ತಂಡದ ಪ್ರಥ್ವಿ ಅಯ್ಯಮ್ಮ, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ಬಿಪಿನ್ ಪಡೆದುಕೊಂಡರು. ಟೂರ್ನಿ ನಿರ್ದೇಶಕರಾಗಿ ನೆಲ್ಲಮಕ್ಕಡ ಪವನ್, ತೀರ್ಪುಗಾರರುಗಳಾಗಿ ಕೊಕ್ಕಂಡ ರೋಶನ್, ಕುಮ್ಮಂಡ ಬೋಸ್, ವೀಕ್ಷಕ ವಿವರಣೆಗಾರರಾಗಿ ಸುಳ್ಳಿಮಾಡ ಸುಬ್ಬಯ್ಯ ಕಾರ್ಯನಿರ್ವಹಿಸಿದರು.
ಜಿಲ್ಲಾ ಪಂಚಾಯಿತಿ ನಡೆದ ಹಾಕಿ ವಿಶ್ವಕಪ್ನಲ್ಲಿ ರಾಜ್ಯದ ಆಟಗಾರರು ಆಯ್ಕೆಯಾಗದಿರುವದು ಬೇಸರದ ಸಂಗತಿ. ಕೊಡಗು ಜಿಲ್ಲೆಯಿಂದ ಮತ್ತಷ್ಟು ದೇಶವನ್ನು ಪ್ರತಿನಿಧಿಸುವಂತಾಗಲು ಇಂತಹ ಟೂರ್ನಿ ಸಹಕಾರಿಯಾಗುತ್ತಿದೆ. ಈ ಬಗ್ಗೆ ಉತ್ತೇಜನ ಅವಶ್ಯ ಎಂದರು.
ಅತಿಥಿಗಳಾಗಿ ದಾನಿ ಪಟ್ರಂಗಡ ಧನಿ ಗಂಗಮ್ಮ, ಅಯ್ಯಪ್ಪ, ಹಿರಿಯ ಹಾಕಿ ಆಟಗಾರ ಜಮ್ಮಡ ನಂದಪ್ಪ, ಹಾಕಿಕೂರ್ಗ್ ಕ್ರೀಡಾಕೂಟ ಸಮಿತಿ ಮುಖ್ಯಸ್ಥ ಬುಟ್ಯಂಡ ಚೆಂಗಪ್ಪ, ನಿರ್ದೇಶಕಿ ವೀಣಾ ಚೆಂಗಪ್ಪ ಪಾಲ್ಗೊಂಡು ಬಹುಮಾನ ವಿತರಿಸಿದರು. -ಸುದ್ದಿಪುತ್ರ