ಗೋಣಿಕೊಪ್ಪ ವರದಿ, ಡಿ. 25: ಮಾಯಮುಡಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಡಶಾಲಾ ಆವರಣದಲ್ಲಿ ಆಯೋಜಿಸಿದ್ದ ಕೊಡವ ಸಾಂಸ್ಕøತಿಕ ಮೇಳದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮಂದತ್ತವ್ವ ತಂಡದ ಗೆಜ್ಜೆತಂಡ್, ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲಾ ತಂಡದ ಕೊಡವ ನೃತ್ಯ ವಿಶೇಷವಾಗಿ ಮೂಡಿ ಬಂತು.

ಕೊಡವ ಸಾಹಿತ್ಯ ಅಕಾಡೆಮಿ, ಕಾವೇರಿ ಅಸೋಸಿಯೇಷನ್, ಗೋಣಿಕೊಪ್ಪ ಕೊಡವ ಸಮಾಜ, ಕಂಗಳತ್ತ್‍ನಾಡ್ ಮಹಿಳಾ ಸಮಾಜ ಹಾಗೂ ಕಂಗಳತ್ತ್‍ನಾಡ್ ಅಮ್ಮಕೊಡವ ಸಂಘದ ಸಹಯೋಗದಲ್ಲಿ ಮಂದತ್ತವ್ವ ತಂಡದ 45 ನಿಮಿಷಗಳ ಗೆಜ್ಜೆತಂಡ್, ಗೋಣಿಕೊಪ್ಪ ಲಯನ್ಸ್ ಪ್ರಾಥಮಿಕ ಶಾಲಾ ತಂಡದ 25 ನಿಮಿಷಗಳ ನಡೆದ ಕೊಡವ ನೃತ್ಯ ಹೆಚ್ಚು ಗಮನ ಸೆಳೆಯಿತು.

ಗೆಜ್ಜೆತಂಡ್ ನೃತ್ಯದಲ್ಲಿ ಕೊಡಗಿನ ಮದುವೆ ಸಂದರ್ಭ ಬಳಸುವ ತಂಡ್‍ನ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹಾಡಿನ ಮೂಲಕ ಭವಿಷ್ಯದಲ್ಲಿ ಕೊಡವ ಕಲೆ ಉಳಿಸಲು ವಿಶೇಷವಾಗಿ ಸಂದೇಶ ಸಾರಲಾಯಿತು. ಮಹಿಳೆಯರು ಕೊಡವ ಸೀರೆಯುಟ್ಟು ನೃತ್ಯ ಮಾಡಿದರು. ಕಂಬಿ ಸೀರೆ, ಬೊಟ್ಟ್ ಸೀರೆ ಹಾಗೂ ಪತ್ತಾಕ್, ಜೋಮಾಲೆ ಗಮನ ಸೆಳೆಯಿತು.

ಲಯನ್ಸ್ ಶಾಲಾ ತಂಡದ ಕೊಡವ ನೃತ್ಯದಲ್ಲಿ ಸುಮಾರು 97 ಕಲಾವಿದರು ಪಾಲ್ಗೊಂಡರು. ಕೊಡವ ಭಾಷಿಗರ ಜನಾಂಗದ ಪ್ರತಿ ಆಚರಣೆಯನ್ನು ಕಲೆಯ ಮೂಲಕ ಪ್ರಸ್ತುತ ಪಡಿಸಿ, ಕೊಡವ ಸಂಸ್ಕøತಿಯಲ್ಲಿ ಕೊಡವ ಭಾಷಿಗರ ಪಾತ್ರವನ್ನು ನೃತ್ಯದ ಮೂಲಕ ಪುಟ್ಟ, ಪುಟ್ಟ ಹೆಜ್ಜೆ ಮೂಲಕ ಬಿಂಬಿಸಿದರು.

ಬಲ್ಯಮೀದೇರೀರ ನಾಣಯ್ಯ ತಂಡದಿಂದ ಸಂಬಂಧ ಅಡುಕುವೊ ಕಾರ್ಯಕ್ರಮ ನಡೆಯಿತು. ಹುದಿಕೇರಿ ಆಮಕ್ಕಡ ತಂಡದಿಂದ ಪರೆಯಕಳಿ, ಕಪ್ಪೆಯಾಟ್ ಪ್ರದರ್ಶನಗೊಂಡಿತು.

ಕೊಡವ ಆರ್ಕೆಸ್ಟ್ರಾ

ಸಂಜೆ ನಡೆದ ಕೊಡವ ಆರ್ಕೆಸ್ಟ್ರಾದಲ್ಲಿ ಕೊಡವ ನೈಟ್ಸ್ ತಂಡದಿಂದ ಕೊಡವ ಹಾಡು, ಹಾಡಿಗೆ ತಕ್ಕ ನೃತ್ಯ ಅನಾವರಣಗೊಂಡಿತು. ಕಲಾವಿದರುಗಳಾದ ಉಳುವಂಗಡ ಲೋಹಿತ್ ಭೀಮಯ್ಯ, ಚೆಕ್ಕೇರ ಪಂಚಮ್ ತ್ಯಾಗರಾಜ್, ನೆಲ್ಲಮಕ್ಕಡ ಸಾಗರ್, ಅಣ್ಣಳಮಾಡ ಗಿರೀಶ್, ಪರದಂಡ ಕಾವ್ಯ ಹಾಡು ಹಾಡಿದರು. ಜಿಮ್ಮಿ ಅಣ್ಣಯ್ಯ ಅವರ ಹಾಡಿನ ಮೂಲಕ ಸ್ವಾಗತ ಗೀತೆ ಹೊರಹೊಮ್ಮಿತು.

ಸಮಾರೋಪ

ಕೊಡವ ಹಾಗೂ ಕೊಡವ ಭಾಷಿಕರ ನಡುವೆ ಒಗ್ಗಟ್ಟು ಹೆಚ್ಚಾಗಲು ಕೊಡವ ಭಾಷಿಕರ ಮೇಳಗಳು ಸಹಕಾರಿಯಾಗಲಿವೆ ಎಂದು ಮಾಯಮುಡಿ ಗ್ರಾಮದ ಹಿರಿಯ ಕಾಫಿ ಬೆಳೆಗಾರ ಸಣ್ಣುವಂಡ ಬಿ. ರಮೇಶ್ ಸಮಾರೋಪ ಸಮಾರಂಭದಲ್ಲಿ ಅಭಿಪ್ರಾಯಪಟ್ಟರು.

ಈ ಸಂದರ್ಭ ಕೊಡವ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ, ಐರಿ ಸಮಾಜ ಅಧ್ಯಕ್ಷ ಮೇಲತಂಡ ಎ. ರಮೇಶ್, ಸಮಾಜ ಸೇವಕ ಸಣ್ಣುವಂಡ ಬಿ. ರಮೇಶ್, ಗ್ರಾ. ಪಂ. ಸದಸ್ಯರುಗಳಾದ ಚೆಪ್ಪುಡೀರ ಪ್ರದೀಪ್, ಕಾಳಪಂಡ ಟಿಪ್ಪು ಬಿದ್ದಪ್ಪ, ಮೇಳ ಸಂಚಾಲಕ ಆಪಟ್ಟೀರ ಟಾಟು ಮೊಣ್ಣಪ್ಪ, ಪ್ರಮುಖರುಗಳಾದ ಬಲ್ಯಂಡ ಪ್ರತಾಪ್, ಪುಚ್ಚಿಮಾಡ ರಾಯ್, ಮಾಚಿಮಾಡ ದೇವಾನಂದ ಉಪಸ್ಥಿತರಿದ್ದರು. ಆಂಗೀರ ಕುಸುಮ್ ಕಾರ್ಯಕ್ರಮ ನಿರೂಪಿಸಿದರು.

-ಸುದ್ದಿಪುತ್ರ