ಮಡಿಕೇರಿ, ಡಿ. 25: ವೀರಾಜಪೇಟೆಯ ಜೈನರಬೀದಿಯ ಹೊಟೇಲ್ ಹಿಂಭಾಗದಲ್ಲಿ ಜೂಜಾಟವಾಡುತ್ತಿದ್ದ 12 ಮಂದಿಯನ್ನು ಇಲ್ಲಿನ ನಗರ ಪೊಲೀಸರು ಬಂಧಿಸಿ ಪಣಕ್ಕಿಟ್ಟಿದ್ದ ರೂ 8,880 ನಗದನ್ನು ವಶ ಪಡಿಸಿಕೊಂಡಿದ್ದಾರೆ.
ಸ್ಥಳೀಯರು ನೀಡಿದ ಸುಳಿವಿನ ಮೇರೆ ನಿನ್ನೆ ದಿನ ರಾತ್ರಿ ಸಬ್ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್ ಅವರ ನೇತೃತ್ವದಲ್ಲಿ ಎ.ಎಸ್.ಐ. ಮುತ್ತಣ್ಣ, ಸುಬ್ರಮಣಿ, ಸತೀಶ್, ರಾಜನ್, ಮುನೀರ್ ಸುನಿಲ್ ಇವರುಗಳು ಧಾಳಿ ನಡೆಸಿ 12 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.